Connect with us

    FILM

    ಅದೇನು ಶಾಪ್ ನಲ್ಲಿ ಸಿಗುವ ಕಾಚಾನಾ ಸಾರ್….ಧನರಾಜ್ ಆಚಾರ್ ಕಾಮಿಡಿಗೆ ಬಿದ್ದು ಬಿದ್ದು ನಕ್ಕ ಸುದೀಪ್

    ಬೆಂಗಳೂರು ಅಕ್ಟೋಬರ್ 06: ಬಿಗ್ ಬಾಸ್ ಸೀಸನ್ 11 ರಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಸ್ಪರ್ಧಿ ಧನರಾಜ್ ಆಚಾರ್ ಅವರ ಕಾಮಿಡಿಗೆ ಕಿಚ್ಚ ಸುದೀಪ್ ಸೇರಿದಂತೆ ಮನೆಯವರೆಲ್ಲ ಬಿದ್ದು ಬಿದ್ದು ನಕ್ಕಿದ್ದಾರೆ. ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೋ ಇದೀಗ ವೈರಲ್ ಆಗಿದೆ.


    ಬಿಗ್ ಬಾಸ್ ಸೀಸನ್ 11 ರ ಮೊದಲ ಪಂಚಾಯ್ತಿ ನಿನ್ನೆ ನಡೆದಿದ್ದು, ಮನೆಯವರು ಬಿಗ್ ಬಾಸ್ ರೂಲ್ಸ್ ಬ್ರೇಕ್ ಮಾಡಿ ಬೇಕಾದಂತೆ ಇದ್ದಿದ್ದಕ್ಕೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಮನೆಯಲ್ಲಿ ಪುಂಡಾಟ ಮೆರೆದಿದ್ದ ಲಾಯರ್ ಜಗದೀಶ್​ಗೆ ಭರ್ಜರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದೀಗ ವಾರದ ಪಂಚಾಯಿತಿಯ ಎರಡನೇ ದಿನ ಭಾನುವಾರ. ಶನಿವಾರದಂದು ಗಂಭೀರವಾಗಿ ಪಂಚಾಯಿತಿ ನಡೆಸಿದ್ದ ಕಿಚ್ಚ ಸುದೀಪ್, ಭಾನುವಾರ ಎಲ್ಲರನ್ನೂ ನಗಿಸುತ್ತಾ ತಮಾಷೆ ಮಾಡುತ್ತಾ ನಡೆಸಿದ್ದಾರೆ. ಮನೆಯ ಸ್ಪರ್ಧಿಗಳಿಗೆ ಯಾವ ಪ್ರಾಣಿಯನ್ನು ಹೋಲಿಸಬಹುದು ಎಂಬ ಪ್ರಶ್ನೆ ಸುದೀಪ್ ಕೇಳಿದ್ದು, ಅದಕ್ಕೆ ಧನರಾಜ್, ಜಗದೀಶ್ ಅವರನ್ನು ಊಸರವಳ್ಳಿಗೆ ಹೋಲಿಸಿದ್ದಾರೆ. ಅವರು ಒಮ್ಮೆ ಬಿಗ್​ಬಾಸ್ ಅನ್ನು ಖರೀದಿಸುತ್ತೇನೆ ಎನ್ನುತ್ತಾರೆ, ಅದೇ ಅಂಗಡಿಯಲ್ಲಿ ಸಿಗುವ ಒಳ ಉಡುಪ ಖರೀದಿ ಮಾಡಲು ಎಂದಿದ್ದಾರೆ. ಧನರಾಜ್ ಕಾಮಿಡಿಗೆ ಎಲ್ಲರೂ ನಕ್ಕಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply