Connect with us

LATEST NEWS

ದೀಪಕ್ ರಾವ್ ಹತ್ಯೆ ಪ್ರಕರಣ: ಸಚಿವ ಖಾದರ್, ಶಾಸಕ ಬಾವ ಜೊತೆ ‘ ಟಾರ್ಗೆಟ್ ‘

ದೀಪಕ್ ರಾವ್ ಹತ್ಯೆ ಪ್ರಕರಣ: ಸಚಿವ ಖಾದರ್, ಶಾಸಕ ಬಾವ ಜೊತೆ ‘ ಟಾರ್ಗೆಟ್ ‘

ಟಾರ್ಗೆಟ್ ಗ್ರೂಪ್ ಪ್ರಮುಖ ಇಲ್ಯಾಸ್ ಜೊತೆಗೆ ನಿಂತಿದ್ದ ಫೋಟೊ ವೈರಲ್

ಮಂಗಳೂರು,ಜನವರಿ 05 :ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿ ಟಾರ್ಗೆಟ್ ಗ್ರೂಪ್ ಸದಸ್ಯರಿದ್ದಾರೆಂಬ ಮಾಹಿತಿ ನಡುವೆಯೇ ಮಂಗಳೂರಿನ ಶಾಸಕ ಮೊಯ್ದೀನ್ ಬಾವಾ ಮತ್ತು ಸಚಿವ ಯು.ಟಿ ಖಾದರ್, ಟಾರ್ಗೆಟ್ ಗ್ರೂಪ್ ಪ್ರಮುಖ ಇಲ್ಯಾಸ್ ಜೊತೆಗೆ ನಿಂತಿದ್ದ ಫೋಟೊ ಈಗ ವೈರಲ್ ಆಗಿದೆ.

ಈ ಹಿಂದೆ ಇಲ್ಯಾಸ್ ಸಚಿವ ಯು.ಟಿ.ಖಾದರ್ ಪ್ರತಿನಿಧಿಸುತ್ತಿರುವ ಉಳ್ಳಾಲ ಯೂತ್ ಕಾಂಗ್ರೆಸ್ ಉಪಾಧ್ಯಕ್ಷನಾಗಿ ಗುರುತಿಸಿಕೊಂಡಿದ್ದ.

ಆ ಬಳಿಕ ನಾಲ್ಕು ತಿಂಗಳ ಹಿಂದೆ ಉಳ್ಳಾಲದಲ್ಲಿ ಬಿಜೆಪಿ ಕಾರ್ಯಕರ್ತ ಝುಬೈರ್ ಕೊಲೆ ಪ್ರಕರಣದಲ್ಲಿ ಟಾರ್ಗೆಟ್ ಗ್ರೂಪಿನ ಕೈವಾಡ ಕೇಳಿ ಬಂದ ಹಿನ್ನೆಲೆಯಲ್ಲಿ ಇಲ್ಯಾಸ್ ನನ್ನು ಪಕ್ಷದ ಪದಾಧಿಕಾರಿ ಹುದ್ದೆಯಿಂದ ಕಾಂಗ್ರೆಸ್ ತೆಗೆದು ಹಾಕಿತ್ತು.

ಇದೀಗ ಮಂಗಳೂರು ಉತ್ತರ ಕ್ಷೇತ್ರ ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ಶಾಸಕ ಮೊಯಿದಿನ್ ಬಾವರ ಸುರತ್ಕಲ್ನ ಕಾಟಿಪಳ್ಳದಲ್ಲಿ ದೀಪಕ್ ರಾವ್ ಅವರ ಹತ್ಯೆ ನಡೆದಿದೆ.

ಇದಕ್ಕೆ ಟಾರ್ಗೆಟ್ ಗ್ರೂಪಿನ ಸದಸ್ಯರನ್ನ ಥಳಕು ಹಾಕಲಾಗುತ್ತಿದೆ.

ಸಚಿವ ಯು.ಟಿ. ಖಾದರ್ ಮತ್ತು ಶಾಸಕ ಮೊಯ್ದೀನ್ ಬಾವಾ ಜೊತೆಗಿದ್ದ ಫೋಟೊಗಳು ಕೂಡ ವೈರಲ್ ಆಗಿದ್ದು ಟಾರ್ಗೆಟ್ ಗ್ರೂಪ್ ಜೊತೆಗೆ ಲಿಂಕ್ ಹೊಂದಿದ್ದಾರೆಂಬ ನೆಲೆಯಲ್ಲಿ ಆರೋಪ ಮಾಡಲಾಗುತ್ತಿದೆ.

ಆದರೆ ಈ ಆರೋಪವನ್ನು ಸ್ವತ ಸಚಿವ ಯು.ಟಿ. ಖಾದರ್ ಅಲ್ಲಗಳೆದಿದ್ದು ತನಗೂ ಇಲ್ಯಾಸಿಗೂ ಯಾವುದೇ ಸಂಬಂಧವಿಲ್ಲ.

ಇನ್ನು ದೀಪಕ್ ಹತ್ಯೆಯಲ್ಲಿ ಇಲ್ಯಾಸ್ ಪಾತ್ರವೂ ಇಲ್ಲ. ಹೀಗಿದ್ದರೂ ದೀಪಕ್ ಹತ್ಯೆ ಸಂದರ್ಭದಲ್ಲಿ ಇಂಥ ಫೋಟೊ ವೈರಲ್ ಮಾಡಿ ತೇಜೋವಧೆ ಮಾಡುತ್ತಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *