DAKSHINA KANNADA
ಪುತ್ತೂರು -ಏಕಾಏಕಿ ರಿವರ್ಸ್ ಚಲಿಸಿದ ಕಾಂಕ್ರಿಟ್ ಮಿಕ್ಸರ್ ವಾಹನ – ಮಹಿಳೆ ಸಾವು

ಪುತ್ತೂರು ಮೇ 24: ರಸ್ತೆ ಕಾಮಗಾರಿಗೆ ಬಂದಿದ್ದ ಕಾಂಕ್ರೀಟ್ ಮಿಕ್ಸಿಂಗ್ ಮಿಲ್ಲರ್ ವಾಹನ ಹಿಂದಕ್ಕೆ ಚಲಿಸಿದಾಗ ವಾಹನದ ಚಕ್ರದಡಿಗೆ ಬಿದ್ದು ಮಹಿಳಾ ಕಾರ್ಮಿಕೆ ಸಾವನಪ್ಪಿದ ಘಟನೆ ಬೆಟ್ಟಂಪಾಡಿ ಗ್ರಾಮದ ಬಿಲ್ವಗಿರಿ ಎಂಬಲ್ಲಿ ನಡೆದಿದೆ.
ಮೃತರನ್ನು ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಬೊಮ್ಮಾಳ ಗ್ರಾಮದ ಬಸವರಾಜು ಅವರ ಪತ್ನಿ ಗೌರಮ್ಮ (28) ಎಂದು ಗುರುತಿಸಲಾಗಿದೆ. ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲ್ವಗಿರಿಯಿಂದ ಎಂಪೆಕಲ್ಲು ಸಂಪರ್ಕಿಸುವ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿಯಲ್ಲಿ ರಾಯಚೂರು ಮೂಲದ ಒಂದೇ ಕುಟುಂಬದ ಹಲವು ಮಂದಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಶುಕ್ರವಾರ ಸಂಜೆ ನಡೆದ ಅವಘಡದಲ್ಲಿ ಗೌರಮ್ಮ ಅವರ ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೂರು ವಾರಗಳಿಂದ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ನಡೆಯುತ್ತಿದ್ದು, ಶುಕ್ರವಾರ ಸಂಜೆ ಕಾಮಗಾರಿ ಮುಕ್ತಾಯದ ಹಂತದಲ್ಲಿತ್ತು. ಕಾಮಗಾರಿ ಗುತ್ತಿಗೆದಾರರಿಗೆ ಸೇರಿದ್ದ ಮಿಲ್ಲರ್ ವಾಹನದಲ್ಲಿ ಗೌರಮ್ಮ ಅವರ ದೊಡ್ಡಪ್ಪನ ಮಗ ಸೋಮನಾಥ್ ಚಾಲಕನಾಗಿದ್ದರು.