LATEST NEWS
ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡಿದ್ದ ರಮೇಶ್ ಕುಲಾಲ್ ಮೃತದೇಹ ಪತ್ತೆ
ಮಂಗಳೂರು ಅಕ್ಟೋಬರ್ 07: ಗುರುಪುರ ಸೇತುವೆಯಿಂದ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ ರಮೇಶ್ ಕುಲಾಲ್ ಅವರ ಮೃತ ದೇಹ ನದಿಯಲ್ಲಿ ಪತ್ತೆಯಾಗಿದೆ.
ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಜೆಸಿಬಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ರಮೇಶ್ ಕುಲಾಲ್ ಅವರು ಶನಿವಾರ ರಾತ್ರಿ 8ಗಂಟೆ ಸುಮಾರಿಗೆ ಗುರುಪುರ ಸೇತುವೆ ಬಳಿಗೆ ಬಸ್ ನಲ್ಲಿ ಬಂದು ಇಳಿದಿದಿದ್ದು, ಬಳಿಕ ನಾಪತ್ತೆಯಾ ಗಿದ್ದರು. ಇವರ ಮೊಬೈಲ್ ಮತ್ತು ಚಪ್ಪಲಿ ಸೇತುವೆಯ ಮೇಲೆ ಪತ್ತೆಯಾಗಿದ್ದು, ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್ಡಿಆರ್ಎಫ್ ಮತ್ತು ಪೊಲೀಸರ ತಂಡ ಗುರುಪುರ ಸೇತುವೆಯ ಫಲ್ಗುಣಿ ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದರು. ಸೋಮವಾರ ಬೆಳಗ್ಗೆ ಮೃತದೇಹ ನದಿಯಲ್ಲೇ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ರಮೇಶ್ ಕುಲಾಲ್ ಅವರು ಕೌಟುಂಬಿಕ ಕಲಹ ಮತ್ತು ಜಾಗದ ವಿಚಾರವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ ಎಂದು ಅವರ ಅಣ್ಣ ಪದ್ಮನಾಭ ಎಂಬವರು ಬಜ್ಪೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
You must be logged in to post a comment Login