Connect with us

    DAKSHINA KANNADA

    ಹುಬ್ಬಳ್ಳಿಯಲ್ಲಿ ಮುಗ್ದ ಹಿಂದೂ ಹೆಣ್ಣುಮಗಳನ್ನು ಲವ್ ಜಿಹಾದ್ ನಲ್ಲಿ ಬಲಿ ಪಡೆದ ಆರೋಪಿ ಫಯಾಜ್ ಗೆ ಗಲ್ಲು ಶಿಕ್ಷೆ ನೀಡಲು ಬಜರಂಗದಳ ಆಗ್ರಹ..

    ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಮುಗ್ದ ಹಿಂದೂ ಹೆಣ್ಣುಮಗಳನ್ನು ಲವ್ ಜಿಹಾದ್ ನಲ್ಲಿ ಬಲಿ ಪಡೆದ ಆರೋಪಿ ಫಯಾಜ್ ಗೆ ಗಲ್ಲು ಶಿಕ್ಷೆ ನೀಡಲು ದಕ್ಷಿಣ ಕನ್ನಡ ಬಜರಂಗದಳ ಆಗ್ರಹಿಸಿದೆ.

    ಹುಬ್ಬಳ್ಳಿಯ ನಿವಾಸಿಯಾದ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಸದಸ್ಯರಾಗಿರುವ ನಿರಂಜನ ಹಿರೇಮಠ ಅವರ ಪುತ್ರಿ , ಹುಬ್ಬಳ್ಳಿಯ ಕಾಲೇಜಿನಲ್ಲಿ ಎಂಸಿಎ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ನೇಹಾ ಎಂಬ ಯುವತಿ ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕೆ ಮತಾಂದ ಫಯಾಜ್ ಕಾಲೇಜು ಕ್ಯಾಂಪಸ್ಸಿನಲ್ಲೇ ಚಾಕುವಿನಿಂದ 9 ಬಾರಿ ಇರಿದು ಕೊಲೆ ಮಾಡಿರುವ ಅಮಾನವೀಯ ಕೃತ್ಯವನ್ನು ಬಲವಾಗಿ ಖಂಡಿಸುತ್ತೇವೆ, ಆರೋಪಿಯನ್ನು ಗಲ್ಲಿಗೇರಿಸಲು ಆಗ್ರಹಿಸುತ್ತೇವೆ, ಮಡಿಕೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಕಾರು ಹತ್ತಿಸಿ ಕೊಲೆ ನಡೆಸಲಾಯಿತು, ರಾಮನವಮಿಯ ಜೈಶ್ರೀರಾಮ್ ಘೋಷಣೆ ಹಾಕಿದಕ್ಕೆ ಹಿಂದೂಗಳ ಮೇಲೆ ಹಲ್ಲೆ, ಚುನಾವಣೆಯ ಸಂಧರ್ಭದಲ್ಲಿ ಹಿಂದುಗಳನ್ನು ಗುರಿಯಾಗಿಟ್ಟುಕೊಂಡು ಇಂತಹ ಕೃತ್ಯಗಳು ನಡೆಯುತ್ತಿದ್ದು, ರಾಜ್ಯಸರಕಾರದ ತುಷ್ಟಿಕರಣ ನೀತಿಯಿಂದ ಮತ್ತು ಮುಸ್ಲಿಂ ಓಲೈಕೆಯಿಂದ ಇಂತಹ ಕೃತ್ಯಗಳಿಗೆ ಪರೋಕ್ಷ ಬೆಂಬಲದಿಂದ ಇಂತಹ ಕೃತ್ಯಗಳು ನಡೆಯುತ್ತಿದ್ದು ಈ ಕೃತ್ಯಗಳ ಹಿಂದೆ ಇರುವ ಜಾಲವನ್ನು ಪತ್ತೆಹಚ್ಚಿ ತಕ್ಷಣ ಕಠಿಣ ಕಾನೂನುಕ್ರಮ ಕೈಗೊಳ್ಳಲು ಆಗ್ರಹ ಎಂದು ಪ್ರಾಂತ ಬಜರಂಗದಳ ಸಂಯೋಜಕ್ ಭುಜಂಗ ಕುಲಾಲ್ ಪ್ರಕಟಣೆಯಲ್ಲಿ ತಿಳಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply