Connect with us

    LATEST NEWS

    ಗೋಕಳ್ಳತನ ವಿರುದ್ದ ಪ್ರತಿಭಟನೆ ಮುಗಿಸಿ ಬರುತ್ತಿರುವಾಗಲೇ ಹಿಂದೂ ಕಾರ್ಯಕರ್ತರ ಕೈಗೆ ಸಿಕ್ಕಿ ಬಿದ್ದ ಗೋಕಳ್ಳರು

    ಉಡುಪಿ:ಗೋ ಕಳ್ಳತನ ವಿರುದ್ದ ನಡೆಯುತ್ತಿರುವ ಜಾಗೃತಿ ಸಭೆ ಸಂದರ್ಭದಲ್ಲೇ ಗೋವು ಅಕ್ರಮ ಸಾಗಾಟ ನಡೆದ ಘಟನೆ ನಡೆದಿದ್ದು, ಹಿಂದೂ ಸಂಘಟನೆಗಳ ಕೈಗೆ ಸಿಕ್ಕಿ ಬೀಳುವ ಹೆದರಿಕೆಯಿಂದ ಕಳ್ಳರು ಕಾರು ಬಿಟ್ಟು ಪರಾರಿಯಾಗಿದ್ದಾರೆ.


    ಈ ಘಟನೆ ನಡೆದಿದ್ದು ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ. ಮಾರುತಿ-800 ಕಾರಿನಲ್ಲಿ ಗೋವು ಕಳ್ಳಸಾಗಣೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಹಿಂದೂ ಜಾಗರಣ ವೇದಿಕೆ ಸದಸ್ಯರು ಕಾರು ಅಡ್ಡಗಟ್ಟಿದಾಗ ಅಸಲಿಯತ್ತು ಬಹಿರಂಗಗೊಂಡಿದೆ.

    ಶಿರ್ಲಾಲಿ ನಲ್ಲಿ ನಿನ್ನೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಸರಣಿ ಗೋಕಳ್ಳತನ ದ ವಿರುದ್ಧ ಪ್ರತಿಭಟನೆ ಮುಗಿಸಿ ಮನೆಗೆ ಮರಳುವಾಗ ಮಾರುತಿ 800 ಕಾರಿನಲ್ಲಿ ಎರಡು ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವ ಮಾಹಿತಿ ಸಿಕ್ಕಿತು.
    ತಕ್ಷಣವೇ ಸಂಘಟನೆಯ ಕಾರ್ಯಕರ್ತರು ಬೆನ್ನಟ್ಟಿದ್ದು, ಕಾರು ಕೆರ್ವಾಶೆಯ ಕಡೆಗೆ ಹೋಗುತ್ತಿತ್ತು ಎನ್ನಲಾಗಿದೆ.
    ಅಲ್ಲದೆ ಮಸೀದಿ ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದು ಕಾರಿನಲ್ಲಿದ್ದವರು ಪರಾರಿಯಾಗಿದ್ದರೆಂದು ತಿಳಿದು ಬಂದಿದೆ.
    ಸ್ಥಳಕ್ಕೆ ಸಂಘಟನೆಯ ಕಾರ್ಯಕರ್ತರು ದೌಡಾಯಿಸಿದ್ದು ಬಿಗುವಿನ ವಾತಾವರಣ ಉಂಟಾಗಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply