LATEST NEWS
ಸುರತ್ಕಲ್ ನಲ್ಲಿ ಕರುವಿನ ಮೇಲೆ ರೌಡಿ ಬೀದಿ ನಾಯಿಗಳ ಅಟ್ಟಹಾಸ, ಕರು ಗಂಭೀರ..!
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಸುರತ್ಕಲ್ : ಮಂಗಳೂರು ಹೊರವಲಯದ ಸುರತ್ಕಲ್ ಕಾಟಿಪಳ್ಳದಲ್ಲಿ ಬಳಿ ಮುಗ್ದ ಆಕಳ ಕರುವಿನ ಮೇಲೆ ರೌಡಿ ಬೀದಿ ನಾಯಿಗಳು( strret dogs) ದಾಳಿ ನಡೆಸಿ ಕೊಚ್ಚಿ ಹಾಕಿದ ದಾರುಣ ಘಟನೆ ನಡೆದಿದೆ.
ಬೀದಿನಾಯಿಗಳ ದಾಳಿಗೆ ಕರು ಗಂಭೀರ ಗಾಯಗೊಂಡಿದ್ದು ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿದೆ. ಮಂಗಳೂರು ಪಾಲಿಕೆ ವ್ಯಾಪ್ತಿ ಮತ್ತು ಪೆರ್ಮುದೆ ಪಂಚಾಯತ್ ನ ಕುತ್ತೆತ್ತೂರು ಗಡಿ ಭಾಗದ ಈದ್ಗಾ ಬಳಿ ಈ ಘಟನೆ ಸಂಭವಿಸಿದ್ದು, ಸುಮಾರು 20 ರಿಂದ 25 ಬೀದಿನಾಯಿಗಳು ಕರುವಿನ ಮೇಲೆ ದಾಳಿ ಮಾಡಿ ಕಚ್ಚಿ ಹಾಕಿದೆ. ಈ ಪ್ರದೇಶದಲ್ಲಿ ಈ ಹಿಂದೆ ಅನಾಧಿಕೃತ ತ್ಯಾಜ್ಯವನ್ನು ಸುರಿಯಲಾಗುತ್ತಿದ್ದು, ಬಳಿಕ ಸ್ಥಳಿಯರ ಪ್ರತಿಭಟನೆಯಿಂದ ತ್ಯಾಜ್ಯ ಹಾಕುವುದು ನಿಲ್ಲಿಸಲಾಗಿದೆ. ಆದ್ರೆ ಆ ತ್ಯಾಜ್ಯ ಸಂದರ್ಭ ಬೀಡುಬಿಟ್ಟ ಬೀದಿ ನಾಯಿಗಳು ಇದೀಗ ಆಹಾರ ಸಿಗದೆ ದನಕರುಗಳ ಮೇಲೆ ದಾಳಿ ಮಾಡುತ್ತಿದೆ. ಈ ಪ್ರದೇಶದಲ್ಲಿ ಬೀದಿ ನಾಯಿಗಳ ದಾಳಿ ಭೀತಿಯಿಂದ ಒಬ್ಬೊಬ್ಬರು ನಡೆದಾಡಲು ಹಿಂಜರಿಯುತ್ತಿದ್ದಾರೆ. ಇದೇ ಮಾರ್ಗವಾಗಿ ನಿತ್ಯ ಶಾಲಾ ಮಕ್ಕಳು, ವೃದ್ದರು, ಮಹಿಳೆಯರು ನಡೆದುಕೊಂಡುಬ ಹೋಗುತ್ತಿದ್ದು ಇದೀಗ ಬೀದಿನಾಯಿಗಳ ದಾಳಿಯಿಂದ ಭಯಭೀತರಾಗಿದ್ದಾರೆ. ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ಎಚ್ಚೆತ್ತು ಕೂಡಲೇ ಈ ರೌಡಿ ನಾಯಿಗಳನ್ನು ಮಟ್ಟಹಾಕಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
You must be logged in to post a comment Login