Connect with us

    DAKSHINA KANNADA

    ಪುತ್ತೂರು – ವಿಶ್ವಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಕಾಂಗ್ರೇಸ್ ನಾಯಕರು

    ಪುತ್ತೂರು ಅಕ್ಟೋಬರ್ 23: ವಿಶ್ವ ಹಿಂದೂ ಪರಿಷತ್ ಭೂಮಿ ಪೂಜೆಯಲ್ಲಿ ಕಾಂಗ್ರೇಸ್ ಶಾಸಕ ಸೇರಿದಂತೆ ಕಾಂಗ್ರೇಸ್ ನಾಯಕರು ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಸಂಘ ಪರಿವಾರ ಕಛೇರಿಯ ಆವರಣದಲ್ಲಿ ವಿಎಚ್ ಪಿ ಯ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ ಇಂದು ನೆರವೇರಿಸಲಾಯಿತು.


    ಈ ಕಾರ್ಯಕ್ರಮದಲ್ಲಿ ಪುತ್ತೂರು ಕಾಂಗ್ರೇಸ್ ಶಾಸಕ ಅಶೋಕ್ ಕುಮಾರ್ ರೈ ಹಾಗೂ ಕಾಂಗ್ರೆಸ್ ನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಭಾಗಿಯಾಗಿದ್ದರು. ಬೇರೆ ಕಾರ್ಯಕ್ರಮದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ವಿಎಚ್ ಪಿ ಕಛೇರಿ ಭೂಮಿ ಪೂಜೆಗೆ ಆಗಮಿಸಿದ್ದಾರೆ. ಕಾರಿನಿಂದ ಏಕಾಂಗಿಯಾಗಿ ಕಾರ್ಯಕ್ರಮದ ಸಬಾಂಗಣಕ್ಕೆ ಶಾಸಕ ಅಶೋಕ್ ರೈ ಆಗಮಿಸಿದ್ದರು. ಈ ವೇಳೆ ಅಶೋಕ್ ರೈ ಅವರನ್ನ ವಿಎಚ್ ಪಿ ಪುತ್ತೂರು ಜಿಲ್ಲಾ ಘಟಕದ ಮುಖಂಡರು ಆತ್ಮೀಯವಾಗಿ ಬರಮಾಡಿಕೊಂಡರು.


    ಈ ವೇಳೆ ವಿಹಿಂಪ ರಾಷ್ಟ್ರೀಯ ನಾಯಕನ ಕಾಲಿಗೆ ಶಾಸಕ ಅಶೋಕ್ ರೈ ನಮಸ್ಕರಿಸಿದರು. ಅಶೋಕ್ ರೈ ಅವರ ಜೊತೆ ಯಾವುದೇ ಕಾಂಗ್ರೇಸ್ ಕಾರ್ಯಕರ್ತರು ಸಭಾಂಗಣಕ್ಕೆ ಬರಲಿಲ್ಲ.

    Share Information
    Advertisement
    Click to comment

    You must be logged in to post a comment Login

    Leave a Reply