Connect with us

LATEST NEWS

ಸಾಮಾಜಿಕ ಜಾಲತಾಣದಲ್ಲಿ ಬರೆದ ಕೂಡಲೇ ಅರೆಸ್ಟ್ ಮಾಡ್ಲಿಕ್ಕೆ ಆಗಲ್ಲ – ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ

ಮಂಗಳೂರು, ಜೂನ್ 23: ಪೊಲೀಸ್ ತನಿಖೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವುದನ್ನು ಬಿಟ್ಟು ನೇರವಾಗಿ ಬಂದು ಸಾಕ್ಷ್ಯಾಧಾರಗಳನ್ನು ಕೋಡಿ, ಆದರೆ ತನಿಖೆಗೆ ದಿಕ್ಕು ತಪ್ಪಿಸುವ ರೀತಿಯಲ್ಲಿ, ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯುವ ಕಾರ್ಯವನ್ನು ಯಾರಾದರೂ ನಡೆಸಿದರೂ ಅವರೂ ಕಾನೂನಿನ ಪ್ರಕಾರ ಆರೋಪಿಗಳಾಗುತ್ತಾರೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.


ಮಂಗಳೂರಿನಲ್ಲಿ ಮಾತನಾಡಿದ ಅವರು ಸುಹಾಸ್ ಶೆಟ್ಟಿ ಪ್ರಕರಣ ಸದ್ಯ ಎನ್‌ಐಎಗೆ ವಹಿಸಲಾಗಿದ್ದು, ಅಶ್ರಫ್ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ 100ಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಗಳಿದ್ದರೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದರ ಬದಲು ನೇರವಾಗಿ ಬಂದು ನಮಗೆ ನೀಡಿ ಎಂದರು. ಅದು ಬಿಟ್ಟು ತನಿಖೆಗೆ ದಿಕ್ಕು ತಪ್ಪಿಸುವ ರೀತಿಯಲ್ಲಿ, ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯುವ ಕಾರ್ಯವನ್ನು ಯಾರಾದರೂ ನಡೆಸಿದರೂ ಅವರೂ ಕಾನೂನಿನ ಪ್ರಕಾರ ಆರೋಪಿಗಳಾಗುತ್ತಾರೆ. ಪೊಲೀಸರು ಪಾರದರ್ಶಕವಾಗಿ ಈ ಎರಡೂ ಪ್ರಕರಣಗಳಲ್ಲಿ ಕ್ರಮಗಳನ್ನು ಕೈಗೊಂಡಿದ್ದಾರೆ. ಇತರ ಪ್ರಕರಣಗಳಲ್ಲಿಯೂ ಪೊಲೀಸರು ಕಾನೂನು ಬದ್ಧವಾಗಿಯೇ ಕ್ರಮ ವಹಿಸುತ್ತಾರೆ. ಯಾವುದೇ ಅಮಾಕರಿಗೆ ಸಮಸ್ಯೆ ಆಗದು. ಹಾಗೆಯೇ ತಪ್ಪಿತಸ್ಥರನ್ನು ಬಿಡಲಾಗದು ಎಂದು ಕಮಿಷನರ್ ಸುಧೀರ್ ಶೆಟ್ಟಿ ಸ್ಪಷ್ಟಪಡಿಸಿದರು.

ದ್ವೇಷ ಭಾಷಣ ಮಾಡುವವರನ್ನು ಕೂಡಾ ಬಿಡುವ ಪ್ರಶ್ನೆಯಿಲ್ಲ.ಬಿಎನ್‌ಎಸ್ ನಲ್ಲಿಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ವಿದೆ.  ದ್ವೇಷ ಭಾಷಣಕ್ಕೆ ಜಾಮೀನು ನೀಡಬಹುದು, ಅಗತ್ಯ ಬಿದ್ದರೆ ವಶಕ್ಕೆ ಪಡೆಯಬಹುದು. ಅದು ತನಿಖಾಧಿಕಾರಿಗೆ ಬಿಟ್ಟದ್ದು. ಪದೇ ಪದೇ ಅಂತಹ ಭಾಷಣ ಮಾಡಿದರೆ ಜಡ್ಜ್ ಜಾಮೀನು ನೀಡದೆ ಇರಬಹುದು. ಕಾನೂನು ಹೇಗೆ ಬಳಸಿಕೊಳ್ಳಬೇಕೆಂದು ಗೊತ್ತಿದೆ. ವೇದಿಕೆಯಲ್ಲಿ ನಿಂತು ಪ್ರಚೋದನೆ ಮಾಡಿದರೆ ಅಲ್ಲಿಂದಲೇ ಎಳೆದು ತರುವುದಕ್ಕೂ ಗೊತ್ತಿದೆ ಎಂದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *