DAKSHINA KANNADA
ಬನ್ನೂರು ಚರ್ಚ್ ಗೆ ಸೇರಿದ್ದ ದಫನ ಭೂಮಿಯಲ್ಲಿನ ಸಮಾಧಿಯೊಂದನ್ನು ಒಡೆದು ಹಾಕಿದ ದುಷ್ಕರ್ಮಿಗಳು – ದೂರು ದಾಖಲು

ಪುತ್ತೂರು ಜೂನ್ 25: ಕ್ರೈಸ್ತ ಸಮುದಾಯಕ್ಕೆ ಸೇರಿದ್ದ ದಫನ ಭೂಮಿಯಲ್ಲಿರುವ ಸಮಾಧಿಯೊಂದನ್ನು ಒಡೆದು ಹಾಕಿರುವ ಘಟನೆ ಪುತ್ತೂರು ಹೊರವಲಯದ ಬನ್ನೂರು ಚರ್ಚ್ ಗೆ ಒಳಪಟ್ಟ ಧಫನ ಭೂಮಿಯಲ್ಲಿ ನಡೆದಿದೆ. ಈ ಕುರಿತಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನ್ನೂರಿನ ಸಂತ ಅಂತೋನಿ ಚರ್ಚ್ ಅಧೀನದಲ್ಲಿರುವ ಕ್ರೈಸ್ತ ದಫನ ಭೂಮಿಯಲ್ಲಿ ಯಾರೋ ದುಷ್ಕರ್ಮಿಗಳು ಸಮಾಧಿಯೊಂದನ್ನು ಒಡೆದು ಹಾಕಿದ್ದು ಈ ಕುರಿತು ಚರ್ಚಿನ ಧರ್ಮಗುರುಗಳಾದ ವಂ|ಬಾಲ್ತಾಜಾರ್ ಪಿಂಟೊ ದೂರು ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
