Connect with us

    LATEST NEWS

    ಮಂಗಳೂರು  ಸಂಘನಿಕೇತನ ಗಣೇಶೋತ್ಸವದಲ್ಲಿ ಪಾಲ್ಗೊಂಡ ಚಿತ್ರಪುರ ಶ್ರೀಗಳು

    ಮಂಗಳೂರು : ನಗರದ ಸಂಘನಿಕೇತನದಲ್ಲಿ ನಡೆಯುತ್ತಿರುವ 77 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭದಲ್ಲಿ ಶ್ರೀ ಚಿತ್ರಾಪುರ ಮಠ ಸಂಸ್ಥಾನ ಶಿರಾಲಿ ಇದರ ಮಠಾಧೀಶರಾದ ಶ್ರೀಮತ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರು ಸೋಮವಾರ ಭೇಟಿ ನೀಡಿದರು.

    ಶ್ರೀ ದೇವರ ದರ್ಶನ , ಮಂಗಳಾರತಿ ಬಳಿಕ ಶ್ರೀಗಳವರಿಂದ ಆಶೀರ್ವಚನ ನಡೆಯಿತು . ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಸಮಾಜಮುಖಿ ಚುಟುವಟಿಕೆ ಹಾಗೂ ವ್ಯವಸ್ಥೆ ಬಗ್ಗೆ ಶ್ರೀಗಳವರು ಮೆಚ್ಚುಗೆ ಸೂಚಿಸಿದರು . ಈ ಸಂದರ್ಭದಲ್ಲಿ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಪದಾಧಿಕಾರಿಗಳು , ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ,ವಿನೋದ್ ಶೆಣೈ , ರಘುವೀರ್ ಕಾಮತ್ , ಗಜಾನನ ಪೈ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ , ಸತೀಶ್ ಪ್ರಭು , ಆನಂದ ಪಾಂಗಳ , ಸುರೇಶ್ ಕಾಮತ್ , ಯಸ್ ಆರ್ ಕುಡ್ವ , ಜೀವನರಾಜ್ ಶೆಣೈ , ಅಭಿಷೇಕ್ ಭಂಡಾರಿ , ನಂದನ್ ಮಲ್ಯ , ಹಾಗೂ ನೂರಾರು ಸ್ವಯಂಸೇವಕರು ಉಪಸ್ಥಿತರಿದ್ದರು .

    ಚಿತ್ರ : ಮಂಜು ನೀರೇಶ್ವಾಲ್ಯ

    Share Information
    Advertisement
    Click to comment

    You must be logged in to post a comment Login

    Leave a Reply