DAKSHINA KANNADA
ಬೇಸಗೆಯಲ್ಲಿ ಮಕ್ಕಳ ಆರೋಗ್ಯ ರಕ್ಷಣೆ ಹೇಗಿರಬೇಕು..? ತಜ್ಞರ ಉಪಯುಕ್ತ ಸಲಹೆಗಳು…

ಮಂಗಳೂರು : ಬೇಸಿಗೆ ಶುರುವಾಗಿ ಈಗಾಗಲೇ ಹಲವು ದಿನಗಳು ಕಳೆದಿವೆ. ಈ ಸಂದರ್ಭದಲ್ಲಿ ಹೊರಗಿನ ಅಧಿಕ ತಾಪಮಾನವು ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವ ಸಾಧ್ಯತೆ ಹೆಚ್ಚು. ಆದುದರಿಂದ ತಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ, ಅವರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿದೆ.
ಬೇಸಿಗೆಯಲ್ಲಿ ಮಕ್ಕಳ ಆರೋಗ್ಯ ಸಮಸ್ಯೆಗಳನ್ನು ದೂರವಿಡಲು ಆಯುರ್ವೇದವು ಹಲವಾರು ಪರಿಹಾರಗಳನ್ನು ಉಲ್ಲೇಖಿಸುತ್ತದೆ.
ಬೇಸಿಗೆಯ ಆರೋಗ್ಯ ಸಲಹೆಗಳು –
ಆಹಾರ:
ಬೇಸಿಗೆಯಲ್ಲಿ ಸುಲಭವಾಗಿ ಜೀರ್ಣವಾಗುವ, ಸ್ವಲ್ಪ ಮಟ್ಟಿಗೆ ಆರೋಗ್ಯಕರ ಜಿಡ್ಡಿನಿಂದ ಕೂಡಿದ, ಮಧುರ ರಸಯುಕ್ತ ಅಥವಾ ಸಿಹಿಯಾದ ಹಾಗೂ ದ್ರವ ಪದಾರ್ಥಗಳೊಂದಿಗೆ ಕೂಡಿದ ಆಹಾರ ಪದಾರ್ಥಗಳಿಗೆ ಆದ್ಯತೆ ನೀಡಬೇಕು.
ಕುಚ್ಚಿಲಕ್ಕಿ ಅನ್ನದ ಸೇವನೆ ಉತ್ತಮ.
ದೇಹದಲ್ಲಿ ತೇವಾಂಶವನ್ನು ಕಾಪಾಡುವುದಕ್ಕಾಗಿ ತುಪ್ಪವನ್ನು ಸೇವಿಸಬಹುದು.
ಹೆಚ್ಚು ದಪ್ಪವಾಗಿರದ ಮಾಂಸದ ಸೂಪ್ ಸೇವನೆ ಆರೋಗ್ಯಕ್ಕೆ ಒಳ್ಳೆಯದು.
ಉಪವಾಸವನ್ನು ಆಚರಿಸುವುದು, ಊಟವನ್ನು ಬಿಟ್ಟುಬಿಡುವುದು ಮತ್ತು ಅತಿಯಾಗಿ ತಿನ್ನುವುದನ್ನು ತಪ್ಪಿಸಬೇಕು.
ಸೊಪ್ಪುಗಳು, ಬೀಜಗಳು, ಮುಳ್ಳುಸೌತೆ ಇತ್ಯಾದಿಗಳನ್ನು ಉಪಯೋಗಿಸಿ ತಯಾರಿಸಿದ ಸಲಾಡ್ ಅನ್ನು ಸೇವಿಸುವುದು.
ಅಧಿಕ ಉಪ್ಪು, ಮಸಾಲೆಯುಕ್ತ ಮತ್ತು ಎಣ್ಣೆಯಲ್ಲಿ ಕರಿದ ಆಹಾರಗಳಿಂದ ದೂರವಿರುವುದು.
ಪಾನೀಯಗಳು:
ಅಧಿಕ ಪ್ರಮಾಣದಲ್ಲಿ ನೀರು ಕುಡಿಯುವುದು.
ಎಳ ನೀರು ಅಥವಾ ಕಬ್ಬಿನ ರಸದ ಸೇವನೆ.
ಐದು ಒಣದ್ರಾಕ್ಷಿಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ, ಮರುದಿನ ಬೆಳಿಗ್ಗೆ ಅದನ್ನು ನೀರಿನೊಂದಿಗೆ ಕಿವುಚಿ, ಸೇವಿಸುವುದು.
ಬೇಸಗೆಯಲ್ಲಿ ಸಿಗುವ (ಉದಾಹರಣೆಗೆ: ಕಲ್ಲಂಗಡಿ, ಪೇರಳೆ) ಹಣ್ಣಿನ ರಸಗಳ ಸೇವನೆ.
ಸಕ್ಕರೆ ಮತ್ತು ಮಸಾಲೆ ಪದಾರ್ಥಗಳನ್ನು ಸೇರಿಸಿ ಕಡೆದ ಮೊಸರು.
ಪಂಚಸಾರ – ಜೇನುತುಪ್ಪ, ಖರ್ಜೂರ, ದ್ರಾಕ್ಷಿ, ಮತ್ತು ಸಕ್ಕರೆಯನ್ನು ಸೇರಿಸಿ ತಯಾರಿಸಿದ ತಂಪು ಪಾನೀಯ.
ಬಾಳೆಹಣ್ಣು ಮತ್ತು ಹಲಸಿನ ಹಣ್ಣಿನ ತೆಳುವಾದ ಹೋಳುಗಳಿಂದ ತಯಾರಿಸಿದ, ಮಣ್ಣಿನ ಪಾತ್ರೆಯಲ್ಲಿ ಶೇಖರಿಸಿಟ್ಟು, ಸ್ವಲ್ಪ ಹುಳಿ ಬರಿಸಿದ ಪಾನೀಯ.
ರಾತ್ರಿ ಹೊತ್ತಿನಲ್ಲಿ ಎಮ್ಮೆ ಹಾಲಿನ ಸೇವನೆ.

ಚಟುವಟಿಕೆಗಳು:
ಸ್ನಾನಕ್ಕೆ ಬೇವು, ತುಳಸಿ, ಅರಿಶಿನದಂತಹ ಆಯುರ್ವೇದ ಗಿಡಮೂಲಿಕೆಗಳನ್ನು ಒಳಗೊಂಡಿರುವ ನೀರನ್ನು ಬಳಸುವುದರಿಂದ ಚರ್ಮದ ಸೋಂಕನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಹಗಲಿನಲ್ಲಿ ಸಾಧ್ಯವಾದಷ್ಟು ಹೊರಗೆ ಹೋಗುವುದನ್ನು ತಪ್ಪಿಸಿ.
ಒಳಾಂಗಣ ಆಟಗಳನ್ನು ಆಡುವುದರಿಂದ ಬೇಸಿಗೆಯ ಪ್ರಖರ ಶಾಖದ ಕೆಟ್ಟ ಪರಿಣಾಮಗಳನ್ನು ತಡೆಗಟ್ಟಬಹುದು.
ಹಗಲಿನ ವೇಳೆಯಲ್ಲಿ ಸನ್ಸ್ಕ್ರೀನ್ ಅನ್ನು ಹಚ್ಚಬಹುದು.
ಲೇಪಗಳ ಬಳಕೆ –
ದೇಹವನ್ನು ತಂಪಾಗಿರಿಸಲು ಶ್ರೀಗಂಧದ ಪೇಸ್ಟ್ ಅನ್ನು ಹಚ್ಚುವುದರಿಂದ ನಿರ್ಜಲೀಕರಣವನ್ನು ತಪ್ಪಿಸಬಹುದು ಮತ್ತು ದೇಹವು ಶಾಖದಿಂದ ಬಳಲುವುದನ್ನು ತಪ್ಪಿಸಬಹುದು.
ಲಘುವಾದ ಹತ್ತಿ ಬಟ್ಟೆಗಳನ್ನು ಧರಿಸುವುದು.
ಬೇಸಿಗೆಯಲ್ಲಿ ಮಕ್ಕಳ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರಗಳು:
ಚರ್ಮದ ದದ್ದುಗಳು ಮತ್ತು ತುರಿಕೆ –
ಕೋಲ್ಡ್ ಕಂಪ್ರೆಸ್
ಸ್ನಾನಕ್ಕೆ ಬೇವು, ತುಳಸಿ, ಅರಿಶಿನದಂತಹ ಆಯುರ್ವೇದ ಗಿಡಮೂಲಿಕೆಗಳನ್ನು ಒಳಗೊಂಡಿರುವ ನೀರನ್ನು ಬಳಸುವುದರಿಂದ ಚರ್ಮದ ಸೋಂಕನ್ನು ತಡೆಗಟ್ಟಬಹುದು.
ಏಲಾದಿ ಲೇಪವನ್ನು ಹಾಲಿನೊಂದಿಗೆ ಮಿಶ್ರಗೊಳಿಸಿ ದದ್ದು ಅಥವಾ ತುರಿಕೆ ಇರುವ ಭಾಗಕ್ಕೆ ಹಚ್ಚುವುದು.
ಕುಂಕುಮಾದಿ ತೈಲವನ್ನು ಹಚ್ಚುವುದು.
ರೋಗಬಾಧಿತ ಪ್ರದೇಶವನ್ನು ತ್ರಿಫಲಾ ಕಷಾಯದಿಂದ ತೊಳೆಯುವುದು
ಸನ್ ಬರ್ನ್:
ಪೀಡಿತ ಭಾಗದಲ್ಲಿ ಶತಧೌತ ಘೃತದ ಬಳಕೆ.
ಅಲೋವೆರಾ ಜೆಲ್ ಹಚ್ಚುವುದು.
ನೆಗಡಿ :
ಸಾಕಷ್ಟು ದ್ರವ ಪದಾರ್ಥಗಳ ಸೇವನೆ.
ದೈಹಿಕ ಚಟುವಟಿಕೆಗಳ ನಂತರ ಹತ್ತಿ ಬಟ್ಟೆಯಿಂದ ಮಕ್ಕಳ ನೆತ್ತಿಯನ್ನು ಒರೆಸುವುದು.
ಗಂಟಲು ನೋವಿನ ನಿವಾರಣೆಗೆ ಬೆಚ್ಚಗಿನ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು.
ಆಯುರ್ವೇದ ಔಷಧಗಳಾದ ವ್ಯೋಷಾದಿ ಚೂರ್ಣ ಮತ್ತು ಹರಿದ್ರಾ ಖಂಡಗಳ ಬಳಕೆ. (ಆಯುರ್ವೇದ ವೈದ್ಯರ ಸೂಚನೆಯ ಮೇರೆಗೆ ಮಾತ್ರ)
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ