LATEST NEWS
ಉಡುಪಿಯಲ್ಲಿ ಮುಖ್ಯಮಂತ್ರಿ ಸ್ವಾಗತ ಬ್ಯಾನರ್ ಗಳಿಗೆ ಬೆಂಕಿ
ಉಡುಪಿಯಲ್ಲಿ ಮುಖ್ಯಮಂತ್ರಿ ಸ್ವಾಗತ ಬ್ಯಾನರ್ ಗಳಿಗೆ ಬೆಂಕಿ
ಉಡುಪಿ, ಜನವರಿ 08 : ಮುಖ್ಯಮಂತ್ರಿ ಉಡುಪಿ ಜಿಲ್ಲೆಗೆ ಭೇಟಿ ನೀಡುವ ಹಿನ್ನೆಯಲ್ಲಿ ಸಿ ಎಂ ಸ್ವಾಗತಕ್ಕಾಗಿ ಹಾಕಿದ ಬ್ಯಾನರ್ ಗಳಿಗೆ ಬೆಂಕಿ ಹಚ್ಚಲಾಗಿದೆ.
ಕಾಪು ಪರಿಸರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತ ಬ್ಯಾನರ್ ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ನಿನ್ನೆ ತಡ ರಾತ್ರಿ ಈ ಕುಕೃತ್ಯವನ್ನು ಕಿಡಿಗೇಡಿಗಳು ಮಾಡಿದ್ದು, ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲುಗಳಲ್ಲಿ ಹಾಕಲಾದ ಬ್ಯಾನರ್ ಗಳಿಗೆ ಬೆಂಕಿ ಹಚ್ಚಲಾಗಿದೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಅರೆಸುಟ್ಟ ಬ್ಯಾನರ್ ಗಳನ್ನು ತೆರವು ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಸಮೀಪದಲ್ಲಿದ್ದ ಜೆಡಿಎಸ್ ಬ್ಯಾನರಿಗೂ ಬೆಂಕಿ ಹಚ್ಚಲಾಗಿದೆ.
You must be logged in to post a comment Login