ದೇವರ ದರ್ಶನ ಪಡೆದು ವಾಪಾಸ್ ಮನೆ ಕಡೆ ತೆರಳುತ್ತಿದ್ದ ವೇಳೆಯಲ್ಲಿ ಈ ಘಟನೆ ಸಂಭವಿಸಿದ್ದು ಜಿಲ್ಲೆಯ ಸೋಮವಾರ ಸಂತೆಯ ಶ್ರೀಮತಿ ಲೀಲಾ ಎಂಬವರು ಕರಿಮಣಿ ಕಳೆದು ಕೊಂಡಿರುವ ಮಹಿಳೆಯಾಗಿದ್ದಾರೆ.
ತನ್ನ ಸಂಬಂಧಿಕರೊಂದಿಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆಂದು ದೇವರ ದರ್ಶನ ಪಡೆದು ವಾಪಾಸ್ ಮನೆ ಕಡೆ ತೆರಳೆಂದು ಬಸ್ ಸ್ಟ್ಯಾಂಡ್ ಕಡೆಗೆ ಬಂದಿದ್ದರು.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಈ ಸಂದರ್ಭ ಹಾಸನ-ಬೆಂಗಳೂರು ಬಸ್ಗೆ ಇತರರೊಂದಿಗೆ ಹತ್ತಲು ಮುಂದಾಗಿದ್ದಾರೆ.
ಬಸ್ ಹತ್ತೋ ವೇಳೆ ಭಾರಿ ರಶ್ ಕಂಡು ಬಂದಿದ್ದು,ಸೀಟ್ನಲ್ಲಿ ಕುಳಿತುಕೊಂಡಾಗ ಕೊರಳಲ್ಲಿದ್ದ ಕರಿಮಣಿ ಕಾಣೆಯಾಗಿತ್ತು.
ಸುಮಾರು 25 ಗ್ರಾಂ ತೂಕದ ಅಂದಾಜು 87,000 ರೂ. ಮೌಲ್ಯದ ಚಿನ್ನದ ಸರ ಇದಾಗಿದ್ದು, ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login