Connect with us

    DAKSHINA KANNADA

    ಸುಬ್ರಹ್ಮಣ್ಯ ದೇವರ ದರ್ಶಕ್ಕೆ ಬಂದ ಮಹಿಳೆಯ ಕರಿಮಣಿಗೆ ಕೈ ಹಾಕಿದ ಖದೀಮರು..!

    ದೇವರ ದರ್ಶನಕ್ಕಾಗಿ ಪುರಾಣ ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದ ಕೊಡಗಿನ ಮಹಿಳೆಯೊಬ್ಬರ ಕರಿಮಣಿ ಕಳ್ಳರು ಎಗರಿಸಿದ ಘಟನೆ ನಡೆದಿದೆ.
    ಕಡಬ : ದೇವರ ದರ್ಶನಕ್ಕಾಗಿ ಪುರಾಣ ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದ ಕೊಡಗಿನ ಮಹಿಳೆಯೊಬ್ಬರ ಕರಿಮಣಿ ಕಳ್ಳರು ಎಗರಿಸಿದ ಘಟನೆ ನಡೆದಿದೆ.

    ದೇವರ ದರ್ಶನ ಪಡೆದು ವಾಪಾಸ್ ಮನೆ ಕಡೆ ತೆರಳುತ್ತಿದ್ದ ವೇಳೆಯಲ್ಲಿ ಈ ಘಟನೆ ಸಂಭವಿಸಿದ್ದು ಜಿಲ್ಲೆಯ ಸೋಮವಾರ ಸಂತೆಯ ಶ್ರೀಮತಿ ಲೀಲಾ ಎಂಬವರು ಕರಿಮಣಿ ಕಳೆದು ಕೊಂಡಿರುವ ಮಹಿಳೆಯಾಗಿದ್ದಾರೆ.

    ತನ್ನ ಸಂಬಂಧಿಕರೊಂದಿಗೆ   ಕುಕ್ಕೆ ಸುಬ್ರಹ್ಮಣ್ಯಕ್ಕೆಂದು  ದೇವರ ದರ್ಶನ ಪಡೆದು ವಾಪಾಸ್ ಮನೆ ಕಡೆ ತೆರಳೆಂದು  ಬಸ್‌ ಸ್ಟ್ಯಾಂಡ್ ಕಡೆಗೆ ಬಂದಿದ್ದರು.

    ಈ ಸಂದರ್ಭ ಹಾಸನ-ಬೆಂಗಳೂರು ಬಸ್‌ಗೆ ಇತರರೊಂದಿಗೆ ಹತ್ತಲು ಮುಂದಾಗಿದ್ದಾರೆ.

    ಬಸ್‌ ಹತ್ತೋ ವೇಳೆ ಭಾರಿ ರಶ್ ಕಂಡು ಬಂದಿದ್ದು,ಸೀಟ್‌ನಲ್ಲಿ ಕುಳಿತುಕೊಂಡಾಗ ಕೊರಳಲ್ಲಿದ್ದ ಕರಿಮಣಿ ಕಾಣೆಯಾಗಿತ್ತು.

    ಸುಮಾರು 25 ಗ್ರಾಂ ತೂಕದ ಅಂದಾಜು 87,000 ರೂ. ಮೌಲ್ಯದ ಚಿನ್ನದ ಸರ ಇದಾಗಿದ್ದು, ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply