LATEST NEWS
ಬೈಂದೂರು: ಅಕ್ರಮ ಗೋ ಸಾಗಟ, ಓರ್ವ ಆರೋಪಿ ಅಂದರ್
ಬೈಂದೂರು, ಆಗಸ್ಟ್ 22: ಕುಂದಾಪುರದಿಂದ ಭಟ್ಕಳಕ್ಕೆ ಗೋಮಾಂಸ ಸಾಗಾಟ ಮಾಡುತ್ತಿದ್ದ ನ್ಯಾನೋ ಕಾರನ್ನು ತಡೆದು ನಿಲ್ಲಿಸಿದ ಬೈಂದೂರು ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಇನ್ನೋರ್ವ ಕಾರಿನಿಂದ ಇಳಿದು ಪರಾರಿಯಾಗಿರುವ ಘಟನೆ ಆ. 20ರಂದು ಬೈ೦ದೂರು ತಾಲೂಕಿನ ಯಡ್ತರೆ ಗ್ರಾಮದ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ.
ಭಟ್ಕಳ ನಿವಾಸಿ 37ವರ್ಷದ ಮಹಮ್ಮದ್ ಗೌಸ್ ಗವಾಯಿ ಬಂಧಿತ ಆರೋಪಿ. ಪರಾರಿಯಾದ ಆರೋಪಿಯನ್ನು ನಜ್ಮುಲ್ ಎ೦ದು ತಿಳಿದು ಬಂದಿದೆ. ಕಾರಿನಲ್ಲಿ ಸುಮಾರು 22ಸಾವಿರ ರೂ ಮೌಲ್ಯದ 150 ಕೆ.ಜಿ ಗೋ ಮಾಂಸ ಪತ್ತೆಯಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login