Connect with us

    LATEST NEWS

    ಸೇತುವೆಗಳ ಮೇಲೆ ಘನ ವಾಹನ ಸಂಚಾರ ನಿರ್ಬಂಧ : ತಾಂತ್ರಿಕ ಪರಿಶೀಲನೆ ಬಳಿಕ ನಿಧಾ೯ರ

    ಮಂಗಳೂರು ಅಗಸ್ಟ್ 18: ಪೊಳಲಿ ಮತ್ತು ಉಳಾಯಿಬೆಟ್ಟು ಸೇತುವೆ ಹಾಗೂ ದೇರಳಕಟ್ಟೆ ರೆಂಜಾಡಿ ರಸ್ತೆಯ ಉನ್ನತ ತಾಂತ್ರಿಕ ಪರಿಶೀಲನೆಗೆ ಸೋಮವಾರ ತಜ್ಞರ ತಂಡ ಆಗಮಿಸಲಿದೆ.


    ಈಗಾಗಲೇ ಈ ರಸ್ತೆ ಮತ್ತು ಸೇತುವೆ ಮೇಲೆ ವಾಹನಗಳ ಸಂಚಾರಕ್ಕೆ ನಿಬ೯ಂಧ ಹೇರಲಾಗಿದೆ. ಲಘು ವಾಹನ ಮತ್ತು ಬಸ್ಸುಗಳ ಓಡಾಟಕ್ಕೆ ಅವಕಾಶ ನೀಡಬೇಕೆಂದು ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯತ್, ಬಸ್ಸು ಮಾಲೀಕರು, ಸ್ಥಳೀಯ ಸಂಘ ಸಂಸ್ಥೆಗಳ ಸಾವ೯ಜನಿಕರು ಆಗ್ರಹಿಸಿದ್ದರು.

    ಈ ನಿಟ್ಟಿನಲ್ಲಿ ಸೋಮವಾರ ತಾಂತ್ರಿಕ ತಜ್ಞರು ಸೇತುವೆಯನ್ನು ಯಂತ್ರೋಪಕರಣಗಳೊಂದಿಗೆ ಪರಿಶೀಲಿಸಿ, ವರದಿ ನೀಡಿ ಜಿಲ್ಲಾಧಿಕಾರಿಗಳೊಂದಿಗೆ ಚಚಿ೯ಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply