Connect with us

    LATEST NEWS

    ಬ್ರಹ್ಮಾವರ – ಮನೆಯಲ್ಲಿ ಅವಿತು ಕುಳಿತಿದ್ದ ಒಂದು ವರ್ಷದ ಚಿರತೆ ಮರಿ ರಕ್ಷಣೆ

    ಉಡುಪಿ ಸೆಪ್ಟೆಂಬರ್ 30: ಒಂದು ವರ್ಷ ವಯಸ್ಸಿನ ಚಿರತೆ ಮರಿಯೊಂದು ಆಹಾರ ಹುಡುಕಿ ಬಂದು ಮನೆಯೊಳಗೆ ಅವಿತು ಮನೆಯವರಿಗೆ ಕಾಟಕೊಟ್ಟ ಘಟನೆ ಬ್ರಹ್ಮಾವರ ಚಾಂತಾರು ಅಗ್ರಹಾರದ ಕೃಷ್ಣಮೂರ್ತಿ ಕೆದಿಲಾಯ ಮನೆಯಲ್ಲಿ ನಡೆದಿದೆ.


    ಆಹಾರ ಹುಡುಕಿ ಬಂದ 1 ವರ್ಷ ವಯಸ್ಸಿನ ಹೆಣ್ಣು ಚಿರತೆ ಮನೆಯೊಂದರ ಬಳಿಗೆ ಬಂದಿದೆ. ಈ ಸಂದರ್ಭ ಬಲೆ ಹಾಕಿ ಚಿರತೆಯನ್ನು ಬಂಧಿಸಿದರು. ಬಳಿಕ ಬ್ರಹ್ಮಾವರ ಪೊಲೀಸ್ ಮತ್ತು ಅರಣ್ಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.


    ನಂತರ ಮನೆಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಹರ ಸಾಹಸದ ಬಳಿ ಬೋನು ಇರಿಸಿ ಚಿರತೆಯನ್ನು ಹಿಡಿದಿದ್ದಾರೆ. ಚಿರತೆಯ ಆರೋಗ್ಯ ತಪಾಸಣೆ ಮಾಡಿ, ಆರೋಗ್ಯ ದೃಢಿಕರಿಸಿದ ಪಶು ವೈದ್ಯಾಧಿಕಾರಿ ಬಳಿಕ ಸಿದ್ಧಾಪುರ ಬಳಿಯ ಹೊಸಂಗಡಿ ಕಾಡಿನಲ್ಲಿ ಚಿರತೆ ಸ್ವತಂತ್ರಗೊಳಿಸಿದ ಇಲಾಖೆ.

    Share Information
    Advertisement
    Click to comment

    You must be logged in to post a comment Login

    Leave a Reply