Connect with us

    DAKSHINA KANNADA

    ಇದು ಒಂದು ಟ್ರೈಲರ್ ಮಾತ್ರ ಅಗತ್ಯ ಬಿದ್ದರೆ ಪೋಲೀಸ್ ಅಧಿಕಾರಿಗಳ ಮನೆ ಮುಂದೆಯೂ ಪ್ರತಿಭಟನೆ ನಡೆಸುತ್ತೇವೆ – ಭರತ್ ಶೆಟ್ಟಿ

    ಪುತ್ತೂರು ಅಗಸ್ಟ್ 28: ಎಂಎಲ್ಸಿ ಐವನ್ ಡಿಸೋಜಾ ಮೇಲೆ ಪೊಲೀಸರು ಪ್ರಕರಣ ದಾಖಲಿಸಲು ಪೊಲೀಸರು ಮೀನಾಮೇಷ ಎಣಿಸುತ್ತಿದ್ದು, ಅಗತ್ಯ ಬಿದ್ದರೆ ಪೊಲೀಸ್ ಅಧಿಕಾರಿಗಳ ಮನೆ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಶಾಸಕ ಭರತ್ ಶೆಟ್ಟಿ ಎಚ್ಚರಿಸಿದ್ದಾರೆ.


    ಮುಡಾ ಹಗರಣದ ಹಿನ್ನಲೆ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜೀನಾಮೆ ಆಗ್ರಹಿಸಿ ಮತ್ತು ಎಂಎಲ್ಸಿ ಐವನ್ ಡಿಸೋಜಾ ಮೇಲೆ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿ ಪುತ್ತೂರಿನಲ್ಲಿ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದೆ. ಈ ವೇಳೆ ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಬಿಜೆಪಿ ಶಾಸಕರು,ಕಾರ್ಯಕರ್ತರ ಮೇಲೆ ಯಾವುದೇ ಪೋಲೀಸರು ಪ್ರಕರಣ ದಾಖಲಿಸುತ್ತಾರೆ. ಆದರೆ ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರಿಗೆ ಬೆದರಿಕೆ ಹಾಕಿದ ಐವನ್ ಮೇಲೆ ಪ್ರಕರಣ ದಾಖಲಿಸಲು ಮೀನಮೇಷ ಎಣಿಸುತ್ತಿದ್ದಾರೆ. ಕಾನೂನಿನ ಸಲಹೆ ಪಡೆಯಬೇಕು ಎನ್ನುವ ಸಬೂಬು ನೀಡುತ್ತಿದ್ದಾರೆ.

    ಐವನ್ ಮೇಲೆ ಯಾವ ಸೆಕ್ಷನ್ ಹಾಕಬೇಕು ಅನ್ನೋದನ್ನು ಮಂಗಳೂರು ಕಮಿಷನರ್ ಗೆ ಕಳುಹಿಸಲಾಗಿದೆ, ಆದರೂ ಪೋಲೀಸರು ಪ್ರಕರಣ ದಾಖಲಿಸುತ್ತಿಲ್ಲ, ಬಿಜೆಪಿಯವರ ತಾಳ್ಮೆಯನ್ನು ಪರೀಕ್ಷಿಸಬೇಡಿ, ಉಗ್ರ ಹೋರಾಟ ನಡೆಸಿಯೂ ಬಿಜೆಪಿಗೆ ಗೊತ್ತಿದೆ. ಇದು ಒಂದು ಟ್ರೈಲರ್ ಮಾತ್ರ, ಅಗತ್ಯ ಬಿದ್ದರೆ ಪೋಲೀಸ್ ಅಧಿಕಾರಿಗಳ ಮನೆ ಮುಂದೆಯೂ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.


    ಮೂಡಾ ಹಗರಣದಲ್ಲಿ ಸಿದ್ಧರಾಮಯ್ಯ ಭ್ರಷ್ಟಾಚಾರ ಮಾಡಿದ್ದಾರೆ, ಅಸೆಂಬ್ಲಿಯಲ್ಲಿ ಈ ವಿಚಾರ ಚರ್ಚೆಗೆ ಬಿಜೆಪಿ ಪಟ್ಟು ಹಿಡಿದಿತ್ತು, ಆದರೆ ಸರಕಾರ ಇದಕ್ಕೆ ಅವಕಾಶ ನೀಡಿಲ್ಲ. ಕಾಂಗ್ರೇಸ್ ನವರೆಲ್ಲಾ ರಾಹುಲ್ ಗಾಂಧಿಯ ಚೇಲಗಳಂತೆ ವರ್ತಿಸುತ್ತಾರೆ. ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಎಸ್.ಸಿ,ಎಸ್.ಟಿ ಗೆ ಅವಕಾಶ ನೀಡಿಲ್ಲ ಎಂದು ರಾಹುಲ್ ಗಾಂಧಿ‌ ಹೇಳುತ್ತಾರೆ, ಅಂತವನನ್ನು ಕಾಂಗ್ರೇಸಿಗರು ನಾಯಕ ಎಂದು ಕರೆಯುತ್ತಿದ್ದಾರೆ ಎಂದು ಭರತ್ ಶೆಟ್ಟಿ ವಾಗ್ದಾಳಿ ನಡೆಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply