Connect with us

UDUPI

ಜನರ ತೆರಿಗೆ ಹಣದಲ್ಲಿ ನೀಡುವ ಚಿನ್ನದ ಬಿಸ್ಕತ್ ಬಿಜೆಪಿ ಶಾಸಕ ಪಡೆಯಲಾರ : ಆರ್. ಅಶೋಕ್

ಜನರ ತೆರಿಗೆ ಹಣದಲ್ಲಿ ನೀಡುವ ಚಿನ್ನದ ಬಿಸ್ಕತ್ ಬಿಜೆಪಿ ಶಾಸಕ ಪಡೆಯಲಾರ : ಆರ್. ಅಶೋಕ್

ಉಡುಪಿ ಅಕ್ಟೋಬರ್ 16: ರಾಹುಲ್ ಗಾಂಧಿ ಹೋದಲೆಲ್ಲಾ ಕಾಂಗ್ರೆಸ್ ಸೋಲು ಕಂಡಿದೆ, ಹಾಗಾಗಿ ರಾಹುಲ್ ಗಾಂಧಿ ರಾಜ್ಯಕ್ಕೆ ಬಂದ್ರೆ ನಾವು ಸ್ವಾಗತಿಸ್ತೀವಿ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಆರ್.ಅಶೋಕ್ ಲೇವಡಿ ಮಾಡಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರ ಜೊತೆ ಮಾತಾಡಿದ ಅವರು ರಾಜ್ಯದ ಬೊಕ್ಕಸ ಲೂಟಿಯಾಗಿದೆ.

ಈ ಸಂದರ್ಭದಲ್ಲಿ ಜನರ ತೆರಿಗೆ ಹಣದಲ್ಲಿ ಕೊಡಲ್ಪಡುವ ಚಿನ್ನದ ಬಿಸ್ಕೆಟ್ಟನ್ನು ಬಿಜೆಪಿ ಶಾಸಕರು ಪಡೆಯಲಾರರು ಎಂದರು. ಇನ್ನು ಬೆಂಗಳೂರು ಮಳೆ ಅವಾಂತರಕ್ಕೆ ಪ್ರತಿಕ್ರಿಯಿಸಿದ ಅವರು,  ಬೆಂಗಳೂರಿನಲ್ಲಿ ಕಾರ್ಪೊರೇಷನ್ ಸತ್ತು ಹೋಗಿದೆ. ಬೆಂಗಳೂರಿನಲ್ಲಿ 6 ಮಂದಿ ಮಂತ್ರಿಗಳಿದ್ದರೂ ಒಬ್ಬರೂ ಕಾಣಿಸ್ತಿಲ್ಲ. ಪರಿಹಾರ ನೀಡಬೇಕಾದ ಸರಕಾರ ಕಾಟಾಚಾರದ ಕೆಲಸ ಮಾಡ್ತಿದೆ . ಮುಚ್ಚಬೇಕಾದ ಗುಂಡಿಗಳು ಇನ್ನೂ ತೆರೆದೇ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು..

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *