Connect with us

LATEST NEWS

ರಸ್ತೆಯಲ್ಲಿ ಹರಿದ ಆಯಿಲ್, ಸ್ಕಿಡ್ ಆಗಿ ಬಿದ್ದ ಬೈಕ್ ಸವಾರರು

ರಸ್ತೆಯಲ್ಲಿ ಹರಿದ ಆಯಿಲ್, ಸ್ಕಿಡ್ ಆಗಿ ಬಿದ್ದ ಬೈಕ್ ಸವಾರರು

ಮಂಗಳೂರು ಸೆಪ್ಟೆಂಬರ್ 18: ಮಂಗಳೂರು ಜನನಿಬಿಡ ರಸ್ತೆಯಲ್ಲಿ ಆಯಿಲ್ ಹರಿದು ದ್ವಿಚಕ್ರ ವಾಹನ ಸವಾರರು ರಸ್ತೆಗೆ ಉರುಳಿ ಬಿದ್ದು ಗಾಯಗೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ನಗರದ ಜ್ಯೋತಿ ವೃತ್ತದ ಬಳಿಯ ಬಲ್ಮಠ ಜ್ಯೋತಿ ರಸ್ತೆಯಲ್ಲಿರುವ ಡ್ರೈನೇಜ್ ನ ಮ್ಯಾನ್ ಹೋಲ್ ತೆರೆದು ರಭಸವಾಗಿ ಆಯಿಲ್ ರಸ್ತೆಗೆ ಹರಿದಿದೆ. ಇದರ ಪರಿಣಾಮ ರಸ್ತೆಯಲ್ಲಿ ಸಾಗಿ ಬರುತ್ತಿದ್ದ ವಾಹನಗಳು ಅದರಲ್ಲೂ ದ್ವಿಚಕ್ರ ವಾಹನ ಸವಾರರೂ ಸ್ಕಿಡ್ ಆಗಿ ರಸ್ತೆಗೆ ಉರುಳಿ ಗಾಯಗೊಂಡಿದ್ದಾರೆ.

10ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ರಸ್ತೆಗೆ ಉರುಳಿ ಬಿದ್ದ ಪರಿಣಾಮ 12 ಜನರಿಗೆ ಗಾಯಗಳಾಗಿದೆ. ಜ್ಯೋತಿ ವೃತ್ತದ ಬಳಿ ಇರುವ ಪ್ರಮುಖ ಹೋಟೆಲುಗಳು,ಫಾಸ್ಟ್ ಫುಡ್ ಗಳ ಬಳಸಿ ಬಿಸಾಡುವ ವೇಸ್ಟ್ ಎಣ್ಣೆಯನ್ನು ಸುರಿದ ಪರಿಣಾಮ  ಆ ತಾಜ್ಯ ಎಣ್ಣೆ ಮ್ಯಾನ್ ಹೋಲ್  ಮೂಲಕ ಹೊರಗೆ ಬಂದಿದ್ದೇ ಈ ಅವಾಂತರಕ್ಕೆ ಕಾರಣ ಎಂದು ಹೇಳಲಾಗಿದೆ .ರಸ್ತೆಯಲ್ಲಿ ವಾಹನಗಳು ಒಮ್ಮಿಂದೊಮ್ಮೆ ಉರುಳಿ ಬಿದ್ದ ಪರಿಣಾಮ ನಗರ ವ್ಯಾಪ್ತಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಈ ಕುರಿತು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಡ್ರೈನೇಜ್ ನಿಂದ ಹರಿಯುತ್ತಿರುವ ನಿಲ್ಲಿಸಲು ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಹಾಗೂ ವಾಹನ ಸವಾರರು ದೂರಿದ್ದಾರೆ .

 

ವಿಡಿಯೋಗಾಗಿ…

Share Information
Advertisement
Click to comment

You must be logged in to post a comment Login

Leave a Reply