Connect with us

    LATEST NEWS

    ಮರಕ್ಕೆ ಬೈಕ್ ಢಿಕ್ಕಿ,ಸುದ್ದಿ ವಾಹಿನಿ ವರದಿಗಾರ ಸಾವು : ಅಮಾನವಿಯ ರೀತಿಯಲ್ಲಿ ಶವ ಸಾಗಿಸಿದ ಪೋಲಿಸರು

    ಮರಕ್ಕೆ ಬೈಕ್ ಢಿಕ್ಕಿ,ಸುದ್ದಿ ವಾಹಿನಿ ವರದಿಗಾರ ಸಾವು : ಅಮಾನವಿಯ ರೀತಿಯಲ್ಲಿ ಶವ ಸಾಗಿಸಿದ ಪೋಲಿಸರು

    ಹಾವೇರಿ,ಜನವರಿ 14 : ಬೈಕ್ ಮರಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಸುದ್ದಿ ವಾಹಿನಿ ವರದಿಗಾರ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

    ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಗುಂಡೂರು ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ.

    ಮೃತರನ್ನು ಮೌನೇಶ ಪೋತರಾಜ (28 ವರ್ಷ) ಎಂದು ಗುರುತ್ತಿಸಲಾಗಿದೆ.

    ಮೌನೇಶ ಕಾರವಾರ ಜಿಲ್ಲೆ ಶಿರಸಿಯಲ್ಲಿ ಸುದ್ದಿಟಿವಿ ವರದಿಗಾರನಾಗಿದ್ದ ಕೆಲಸ ಮಾಡುತ್ತಿದ್ದರು.

    ನಿನ್ನೆ ರಾತ್ರಿ ಶಿರಸಿಯಿಂದ ಛಬ್ಬಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಹಾನಗಲ್ ಠಾಣೆ ಪೊಲೀಸರ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿದ್ದಾರೆ.

    ಅಮಾನವೀಯ ರೀತಿಯಲ್ಲಿ ಶವ ಸಾಗಾಟ :

    ಅಪಘಾತದಲ್ಲಿ ಮೃತಪಟ್ಟ ಸುದ್ದಿಟಿವಿ ವರದಿಗಾರನಾಗಿದ್ದ ಮೌನೇಶ ಅವರ ಶವವನ್ನು ಪೋಲಿಸರು ಅಮಾವೀಯ ರೀತಿಯಲ್ಲಿ ಸಾಗಿಸಿದ್ದಾರೆ.

    ಮುನ್ಸಿಪಾಲ್ಟಿಯ ವಾಹನದಲ್ಲಿ ಸತ್ತ ಪ್ರಾಣಿ ಕೊಂಡುಹೋಗುವ ರೀತಿಯಲ್ಲಿ ಮೌನೇಶ ಅವರ ಶವವನ್ನಿಟ್ಟು ಅದನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಪೋಲಿಸರು.

    ಪೋಲಿಸರ ಈ ಕ್ರಮಕ್ಕೆ ವ್ಯಾಪಾಕ ಆಕ್ರೋಶ ವ್ಯಕ್ತವಾಗಿದೆ.

    ಅಮಾನವಿಯ ರೀತಿಯಲ್ಲಿ ಶವ ಸಾಗಿಸಿದ ವಿಡಿಯೋ :

     

    Share Information
    Advertisement
    Click to comment

    You must be logged in to post a comment Login

    Leave a Reply