Connect with us

LATEST NEWS

ಕಾಂಗ್ರೆಸ್ಸಿನ ಭಾಸ್ಕರ್ ಮೊಯಿಲಿ ಪಾಲಿಕೆಯ ನೂತನ ಮೇಯರ್ ಉಪ ಮೇಯರ್ ಆಗಿ ಮಹಮ್ಮದ್ ಕುಂಜತ್ ಬೈಲ್ ಆಯ್ಕೆ

ಕಾಂಗ್ರೆಸ್ಸಿನ ಭಾಸ್ಕರ್ ಮೊಯಿಲಿ ಪಾಲಿಕೆಯ ನೂತನ ಮೇಯರ್, ಉಪ ಮೇಯರ್ ಆಗಿ ಮಹಮ್ಮದ್ ಕುಂಜತ್ ಬೈಲ್ ಆಯ್ಕೆ

ಮಂಗಳೂರು, ಮಾರ್ಚ್ 08 : ಮಂಗಳೂರು ಮಹಾ ನಗರ ಪಾಲಿಕೆಯ ನೂತನ ಮೇಯರ್ ಆಗಿ ಹಿರಿಯ ಸದಸ್ಯ ಭಾಸ್ಕರ್. ಕೆ.ಮೊಯಿಲಿ ಅವರು ಆಯ್ಕೆಯಾಗಿದ್ದಾರೆ.

ಇಂದು ಮಂಗಳೂರು ಮಹಾ ನಗರ ಪಾಲಿಕೆಯ ಸಭಾಂಗಣದಲ್ಲಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಮೇಲುಸ್ತುವಾರಿಯಲ್ಲಿ ನಡೆದ ಚುನಾವಣೆಯಲ್ಲಿ ಭಾಸ್ಕರ ಮೊಯಿಲಿ ಅವರು ಮೇಯರ್ ಆಗಿ ಅವರು ಆಯ್ಕೆಯಾದರು.

ಕಾಂಗ್ರೆಸ್ ಅಭ್ಯರ್ಥಿ ಭಾಸ್ಕರ ಮೊಯ್ಲಿ ಪರ 37 ಮತಗಳು ಬಿದ್ದರೆ , ಬಿಜೆಪಿ ಸುರೇಂದ್ರ ಶೆಟ್ಟಿ ಪರ 19 ಮತಗಳು ಚಲಾವಣೆಯಾದವು.

ಜೆಡಿಸ್ ನ ಇಬ್ಬರು, ಸಿಪಿಎಂ, ಎಸ್ ಡಿಪಿಐ ಹಾಗೂ ಪಕ್ಷೇತರ ತಲಾ ಮೂವರು ಹೀಗೇ 5 ಸದಸ್ಯರು ಮತ ಚಲಾವಣೆ ಮಾಡದೆ ತಟಸ್ಥರಾಗಿ ಉಳಿದರು.

60 ಕಾರ್ಪೋರೇಟರ್, 2 ಎಂಎಲ್ ಎ, 2 ಎಂಎಲ್ ಸಿ, 1 ಎಂಪಿ ಸೇರಿ 65 ಮತಗಳಿದ್ದು, ಮತ ಚಲಾಯಿಸಲು ಅರ್ಹತೆ ಹೊಂದಿದ್ದ 65 ಮಂದಿಯಲ್ಲಿ 61 ಮಂದಿ ಮಾತ್ರ ಚುನಾವಣಾ ಪ್ರಕ್ರೀಯೆಯಲ್ಲಿ ಭಾಗಿಯಾಗಿದ್ದರು.

ಸಂಸದ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ಶಾಸಕ ಮೊಯ್ದೀನ್ ಬಾವಾ, ಎಂಎಲ್ ಸಿ ಗಣೇಶ್ ಕಾರ್ಣಿಕ್, ಬಿಜೆಪಿ ಸದಸ್ಯ ಹರೀಶ್ ಶೆಟ್ಟಿ ಗೈರಾಗಿದ್ದರು.

ಶಾಸಕ ಜೆ.ಆರ್. ಲೋಬೊ, ಎಂಎಲ್ ಸಿ ಐವನ್ ಡಿಸೋಜಾ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಚಲಾಯಿಸಿದರು.

ಚುನಾವಣಾಧಿಕಾರಿ ಶಿವಯೋಗಿ ಸಿ. ಕಳಸದ ಅವರು ಚುನಾವಣಾ ಪ್ರಕ್ರೀಯೆಗಳನ್ನು ನಡೆಸಿಕೊಟ್ಟರು.

ಅಪರ ಜಿಲ್ಲಾ ಧಿಕಾರಿ ಕುಮಾರ್ , ಮನಪಾ ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *