Connect with us

    DAKSHINA KANNADA

    ‘ರಾಹುಲ್ ಮೈ ಮುಟ್ಟುವ ತಾಕತ್ತು ನಿಮಗಿದೆಯೆ ಭರತ್ ಶೆಟ್ಟಿಯವರೇ.?’ : ಗಿರೀಶ್ ಆಳ್ವ

    ಮಂಗಳೂರು : ಲೋಕಸಭೆಯ  ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ  ಶಾಸಕ  ಡಾ. ಭರತ್ ಶೆಟ್ಟಿ ಆಡಿದ  ಟೀಕೆಯ ಮಾತುಗಳು ಇದೀಗ ವಿವಾದ ಸೃಷ್ಟಿಸಿದೆ.

    ರಾಹುಲ್ ಮೈ ಮುಟ್ಟುವ ತಾಕತ್ತು ನಿಮಗಿದೆಯೆ ಭರತ್ ಶೆಟ್ಟಿಯವರೇ.? ಎಂದು ಯುವಕಾಂಗ್ರೆಸ್ ದಕ್ಷಿಣ ಕನ್ನಡ ಕಾರ್ಯಾಧ್ಯಕ್ಷ ಗಿರೀಶ್ ಆಳ್ವ ಪ್ರಶ್ನಿಸಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ  ಮಾಡಿರುವ ಗೀರೀಶ್ ಆಳ್ವ  ‘ನೀವು ಶಾಸಕರಾಗಳು ನಾಲಾಯಕ್, ಸಂವಿಧಾನ ದ ಆಶಯದಂತೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿ, ನೀವು ರಸ್ತೆ ಬದಿ ಪುಡಿ ರೌಡಿಗಳ ರೀತಿ ವರ್ತಿಸುತೀರಿ. ನಿಮ್ಮ ಚೇಲಾಗಳನ್ನು ಖುಷಿಪಡಿಸಲು ಈ ರೀತಿ ಅಸಂವಿಧಾನಿಕ ಮಾತುಗಳನ್ನಾಡುವುದನ್ನು ಜಿಲ್ಲಾ ಯುವ ಕಾಂಗ್ರೆಸ್ ಖಂಡಿಸುತ್ತದೆ. ಈ ಜಿಲ್ಲೆಯ ಬಿಜೆಪಿ ಶಾಸಕರುಗಳು ತನ್ನ ಪಕ್ಷದೊಳಗೆ ನಾಯಕರಾಗಳು ಪೈಪೋಟಿಯಲ್ಲಿದ್ದಾರೆ. ನಿಮ್ಮ ಪೈಪೋಟಿ ನಿಮ್ಮ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿ ತೋರಿಸಿ. ಈ ರೀತಿ ವಿವಾದತ್ಮಕ ಹೇಳಿಕೆಗಳಿಂದ ಅಲ್ಲ.. ನಮ್ಮ ಯುವ ಕಾರ್ಯಕರ್ತರಿಗೂ ನಿಮ್ಮದೇ ದಾಟಿಯಲ್ಲಿ ಉತ್ತರ ನೀಡಲು ಗೊತ್ತಿದೆ.. ಆದರೆ ಇದು ನಮ್ಮ ಸಂಸ್ಕೃತಿಯಲ್ಲ ಎಂದು ಗುಡುಗಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply