Connect with us

BELTHANGADI

ಬೆಳ್ತಂಗಡಿ: ಖ್ಯಾತ ಹಾವು ಸಂರಕ್ಷಕ ಸ್ನೇಕ್ ಅಶೋಕ್ ಗೆ ಹಾವು ಕಡಿತ

ಬೆಳ್ತಂಗಡಿ, ಮಾರ್ಚ್ 26: ಖ್ಯಾತ ಹಾವು ಸಂರಕ್ಷಕನಿಗೆ ನಾಗರಹಾವು ಕಡಿತ ಗೊಂಡ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ.

 

ಬೆಳ್ತಂಗಡಿಯ ಲಾಯಿಲ ನಿವಾಸಿ ಸ್ನೇಕ್ ಅಶೋಕ್ ಹಾವಿನಿಂದ ಕಡಿತಕೊಳಗಾದವರು. ಧರ್ಮಸ್ಥಳ ಸಮೀಪದ ಮನೆಯೊಂದರಲ್ಲಿ ರಾತ್ರಿ ವೇಳೆ ಹಾವು ಪತ್ತೆಯಾಗಿದೆ.

ಹಾವನ್ನು ರಕ್ಷಿಸಲು ರಾತ್ರಿ ಸ್ನೇಕ್ ಅಶೋಕ್ ಅವರಿಗೆ ಕರೆ ಬಂದಿದ್ದು, ರಾತ್ರಿ ವೇಳೆ ಕಾರ್ಯಾಚರಣೆ ನಡೆಸಿದ್ದ ಸಂದರ್ಭ ಅಶೋಕ್ ಬಲಗಾಲಿಗೆ ಹಾವು ಕಚ್ಚಿದೆ.

ತಕ್ಣಣ ಅಶೋಕ್ ಅವರನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸ್ನೇಕ್ ಅಶೋಕ್ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement
Click to comment

You must be logged in to post a comment Login

Leave a Reply