BELTHANGADI
ಮಳೆಗಾಲದಲ್ಲಿ ಬೆಳ್ತಂಗಡಿ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಕಾಮಗಾರಿ – ಆಪತ್ತಿನಲ್ಲಿ ಪೊಲೀಸ್ ಠಾಣೆ
ಬೆಳ್ತಂಗಡಿ ಜುಲೈ 08 : ಮಳೆಗಾಲದ ಆರಂಭದ ಬಳಿಕ ಬೆಳ್ತಂಗಡಿಯಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಕಾಮಗಾರಿ ಮಾಡುತ್ತಿದ್ದು ಇದರಿಂದಾಗಿ ಧರೆಯ ಮಣ್ಣು ಕುಸಿದು ಪಕ್ಕದ ಪೊಲೀಸ್ ಠಾಣೆಯ ಆವರಣಗೋಡೆ ಕುಸಿಯುವ ಭೀತಿ ಎದುರಾಗಿದೆ.
ಬೆಳ್ತಂಗಡಿ ತಾಲ್ಲೂಕು ಕಚೇರಿಯ ಶತಮಾನದಷ್ಟು ಹಳೆಯದಾದ ಕಟ್ಟಡವನ್ನು ಕೆಡವಿ ಅದೇ ಜಾಗದಲ್ಲಿ ಹೊಸ ಬಸ್ ನಿಲ್ದಾಣದ ಕಾಮಗಾರಿ ನಡೆಯುತ್ತಿದೆ. ಬಸ್ ನಿಲ್ದಾಣದ ನಿಲುಗಡೆ ಪ್ರದೇಶಕ್ಕಾಗಿ 10 ರಿಂದ 15 ಅಡಿ ಆಳದಲ್ಲಿ ಮಣ್ಣು ತೆಗೆಯಲಾಗಿದೆ. ಮತ್ತೊಂದೆಡೆ ತಡೆಗೋಡೆ ನಿರ್ಮಾಣ ಕಾರ್ಯ ನಡೆದು ಮಣ್ಣು ತುಂಬಿಸಲಾಗಿದ್ದರೂ, ವಿಪರೀತ ಮಳೆಯಿಂದಾಗಿ ಪೊಲೀಸ್ ಠಾಣೆಯ ಭಾಗದಲ್ಲಿ ಮಣ್ಣು ಕುಸಿದಿದೆ. ಮಳೆ ಮುಂದುವರಿದರೆ ಇನ್ನಷ್ಟು ಮಣ್ಣು ಕುಸಿದು ಠಾಣೆಯ ಆವರಣ ಗೋಡೆ ಕುಸಿಯುವ ಸಾಧ್ಯತೆಯಿದೆ.
You must be logged in to post a comment Login