Connect with us

DAKSHINA KANNADA

ಎರಡು ವರ್ಷಗಳ ಹಿಂದಿನ ಕಳವು ಪ್ರಕರಣದ ಆರೋಪಿ ಅರೆಸ್ಟ್ ಮಾಡಿದ ಬೆಳ್ಳಾರೆ ಪೊಲೀಸರು

ಸುಳ್ಯ ಜುಲೈ 02 : ಎರಡು ವರ್ಷಗಳ ಹಿಂದೆ ಮನೆಯೊಂದರಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಬೆಳ್ಳಾರೆ ಪೊಲೀಸರು ಯಶಸ್ವಿಯಾಗಿದ್ದಾರೆ.


ಬಂಧಿತನನ್ನು ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಶರತ್ (24) ಎಂದು ಗುರುತಿಸಲಾಗಿದ್ದು, ಆರೋಪಿಯಿಂದ ಕಳವು ಮಾಡಲಾದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಎರಡು ವರ್ಷಗಳ ಹಿಂದೆ ಬೆಳ್ಳಾರೆಯ ಜಾತ್ರೆಯೊಂದರಲ್ಲಿ ಆರೋಪಿ‌ ಶರತ್ ಕಬ್ಬು ಜ್ಯೂಸ್ ಮಾಡಲು ಬಂದಿದ್ದು ಈ ವೇಳೆ ಎಡಮಂಗಲ ಗ್ರಾಮದ ದಡ್ಡು ಎಂಬಲ್ಲಿ ನಗ ನಗದು ಸೇರಿ ಸುಮಾರು 1.78 ಲಕ್ಷ ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿತ್ತು. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *