Connect with us

    DAKSHINA KANNADA

    ನಿಮ್ಮ ಗಮನಕ್ಕೆ ಬಾರದೆ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಬಹುದು ಎಚ್ಚರ!

    ಮಂಗಳೂರು, ಡಿಸೆಂಬರ್ 27 : ದಿನೇ ದಿನೇ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗುತ್ತಿದೆ ಅಲ್ಲೋ ಇಲ್ಲೋ ನಡೆಯುತ್ತಿದ್ದ ಸೈಬರ್ ಕ್ರೈಮ್ ಪ್ರಕರಣ ಇಂದು ನಮ್ಮ ನಗರಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ನಗರದಲ್ಲಿ ಈಗಾಗಲೇ ಗಮನಕ್ಕೆ ಬಾರದೆ ಹಣ ಕಳೆದುಕೊಂಡವರ ಎರಡು ಪ್ರಕರಣ ದಾಖಲಾಗಿದೆ.

    ದಯಾನಂದ ಎಂಬವರು ಬೈಕಂಪಾಡಿ ಶಾಖೆಯ ಯೂನಿಯನ್ ಬ್ಯಾಂಕ್​​ನಲ್ಲಿ ಖಾತೆ ಹೊಂದಿದ್ದು ಇವರ ಗಮನಕ್ಕೆ ಬಾರದೇ ಇವರ ಖಾತೆಯಿಂದಲೇ 20 ಸಾವಿರ ರೂ. ನಗದು ತೆಗೆದಿದ್ದಾರೆ.

    ಮತ್ತೊಂದೆಡೆ ಜಾನೆಟ್ ಡಿಸೋಜ ಎಂಬವರು ಕೆನರಾ ಬ್ಯಾಂಕ್ ಬಲ್ಮಠ ಶಾಖೆಯಲ್ಲಿ ಖಾತೆಯನ್ನು ಹೊಂದಿದ್ದು ಈ ಖಾತೆಯಲ್ಲಿದ್ದ 40 ಸಾವಿರ ರೂ ಡ್ರಾ ಮಾಡಿಕೊಂಡಿದ್ದಾರೆ.

    ಇಬ್ಬರ ಬ್ಯಾಂಕ್ ಖಾತೆಯಿಂದ 60 ಸಾವಿರ ಡ್ರಾ ಮಾಡಲಾಗಿದೆ. ಈ ಬಗ್ಗೆ ಹಣ ಕಳೆದುಕೊಂಡ ಇಬ್ಬರು ಗ್ರಾಹಕರು ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹೆಚ್ಚಿನ ಮಾಹಿತಿ ತನಿಕೆ ನಂತರವೆ ತಿಳಿಯಬೇಕಷ್ಟೆ.

    Share Information
    Advertisement
    Click to comment

    You must be logged in to post a comment Login

    Leave a Reply