Connect with us

LATEST NEWS

ಸಿಪಿ ಯೋಗೀಶ್ವರ್ ದೆಹಲಿ ಪ್ರವಾಸದ ಬಗ್ಗೆ ಮಾಹಿತಿ ಇಲ್ಲ – ಬಿ.ಸಿ ಪಾಟೀಲ್

ಉಡುಪಿ ಜೂನ್ 26: ಪ್ರವಾಸೋದ್ಯಮ ಸಚಿವ ಸಿಪಿ ಯೋಗೀಶ್ವರ್ ದೆಹಲಿ ಪ್ರವಾಸದ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದ್ದಾರೆ.


ಉಡುಪಿಯಲ್ಲಿ ಮಾತನಾಡಿದ ಅವರು ಯೋಗೇಶ್ವರ್ ಸಚಿವರಾಗಿರುವ ಕಾರಣ ದೆಹಲಿಗೆ ಹೋಗಿರಬಹುದು. ಯೋಗೀಶ್ವರ್ ಡೆಲ್ಲಿ ಟೂರ್ ಬಗ್ಗೆ ನಾನು ಯಾಕೆ ಹೇಳಲಿ, ಕರಾವಳಿಯ ಪ್ರವಾಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇನ್ನು ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ, ಜಾರಕಿಹೊಳಿ ವಿರುದ್ಧ ಪಿತೂರಿ ಮಾಡಿ ಸಿಲುಕಿಸಲಾಯಿತು, ಪ್ರಕರಣದ ಸತ್ಯ ಸದ್ಯದಲ್ಲಿ ಹೊರಬರಲಿದೆ. ಜಾರಕಿಹೋಳಿಗೆ ಸೂಕ್ತ ಸ್ಥಾನಮಾನ ಸಿಗಲಿದೆ ಎಂದರು.

ಹಡಿಲು ಭೂಮಿ ಕೃಷಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದು, ಈ ಸಂದರ್ಭ ಸ್ವತಃ ಕೃಷಿ ಭೂಮಿಗೆ ಇಳಿದು ಟ್ಯಾಕ್ಟರ್ ಚಲಾಯಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *