Connect with us

BANTWAL

ಮಾಡತ್ತಡ್ಕದಲ್ಲಿ ಕ್ವಾರಿ ಬಳಿ ಸ್ಫೋಟ ಪ್ರಕರಣ – ಇಬ್ಬರ ವಿರುದ್ದ ಎಫ್ಐಆರ್

ವಿಟ್ಲ ಮಾರ್ಚ್ 06: ವಿಟ್ಲ ಮುಡೂರು ಗ್ರಾಮದ ಮಾಡತ್ತಡ್ಕದಲ್ಲಿ ಕ್ವಾರಿ ಬಳಿ ಮಂಗಳವಾರ ಸಂಭವಿಸಿದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಅಲ್ಲದೆ ಘಟನೆ ನಡೆದ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದವರು ಪರಿಶೀಲನೆ ನಡೆಸಿದ್ದಾರೆ.


ವಿಟ್ಲ ಮುನ್ನೂರು ಗ್ರಾಮದ ಮಾಡತ್ತಡ್ಕಡ ಎನ್.ಎಸ್ ಕೋರೆಯ ಬಳಿಯ ಮೋನಪ್ಪ ಪೂಜಾರಿ ಅವರ ಜಾಗದಲ್ಲಿರುವ ಕಲ್ಲು ಬಂಡೆಗಳ ಬಳಿ ಆರೋಪಿಗಳು ಸ್ಪೋಟಕಗಳನ್ನು (ಜಿಲೆಟಿನ್ ಕಡ್ಡಿಗಳು ಹಾಗೂ ಡಿಟೊನೇಟರ್‌ಗಳು) ಇಟ್ಟಿದ್ದರು. ಆ ಸ್ಪೋಟಕಗಳು ಬಿಸಿಲಿನ ತಾಪದಿಂದ ಸ್ಪೋಟಗೊಂಡಿದ್ದು, ಪರಿಸರದ ಈಶ್ವರ ನಾಯ್ಕ ಮತ್ತು ವಸಂತ ಮೋಹನ ಅವರ ಮನೆಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಸುತ್ತಮುತ್ತಲಿನ ಮರಗಿಡಗಳು ಕರಟಿವೆ. ಆಸುಪಾಸಿನ ಸುಮಾರು 15ಕೂ ಅದಿಕ ಮನೆಗಳಿಗೆ ಅಲ ಪ್ರಮಾಣದಲ್ಲಿ ಹಾನಿಯಾಗಿತು.

ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯತನದಿಂದ ಸ್ಫೋಟಕಗಳನ್ನು ಕ್ವಾರಿಯ ಬಳಿ ಇಟ್ಟಿರುವ ಕುರಿತು ಬಂಟ್ವಾಳ ತಾಲ್ಲೂಕಿನ ಕಾವಳಪಡೂರಿನ ಶ್ರೀರಾಮ್ ಕನ್‌ಸ್ಟ್ರಕ್ಷನ್‌ನ ಅಶೋಕ ಮತ್ತು ಅದರ ಸ್ಫೋಟದ ಕೆಲಸ ಮಾಡುತ್ತಿದ್ದವನ ವಿರುದ್ಧ 1884ರ ಸ್ಫೋಟಕಗಳ ಕಾಯ್ದೆಯ ಸೆಕ್ಷನ್ 9ಬಿ (ಸ್ಫೋಟಕಗಳನ್ನು ಸಾಗಿಸುವುದು) ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 288ರ (ಸ್ಪೋಟಕಗಳನ್ನು ಅಜಾಗರೂಕತೆಯಿಂದ ನಿರ್ವಹಿಸುವುದು) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *