Connect with us

    KARNATAKA

    71 ದಿನಗಳ ಬಳಿಕ ಶಿರೂರು ದುರಂತದಲ್ಲಿ ನಾಪತ್ತೆಯಾಗಿದ್ದ ಕೇರಳದ ಲಾರಿ ಡ್ರೈವರ್ ಅರ್ಜುನ್ ಮೃತ ದೇಹ ಪತ್ತೆ

    ಶಿರೂರು ಸೆಪ್ಟೆಂಬರ್ 25: ಕಳೆದ ಎರಡು ತಿಂಗಳ ಹಿಂದೆ ನಡೆದ ಗುಡ್ಡ ಕುಸಿತದಲ್ಲಿ ಲಾರಿ ಸಮೇತ ನಾಪತ್ತೆಯಾಗಿದ್ದ ಕೇರಳದ ಚಾಲಕ ಅರ್ಜುನ್ ಮೃತದೇಹ ಕೊನೆಗೂ ಪುತ್ತೆಯಾಗಿದೆ. ಜು.16 ರಂದು ಗುಡ್ಡ ಕುಸಿತದ ವೇಳೆ ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿ ಸಹಿತ ಅರ್ಜುನ್ ಕಣ್ಮರೆಯಾಗಿದ್ದರು. ಅವರ ಪತ್ತೆಗೆ ಕೇರಳ ಸರ್ಕಾರ ವ್ಯಾಪಕ ಒತ್ತಡ ಹೇರಿತ್ತು.


    ಎರಡು ದಿನಗಳ ಹಿಂದೆ ಈಶ್ವರ್ ಮಲ್ಪೆ ಅವರ ತಂಡ ಲಾರಿಗೆ ಸಂಬಂಧಿದ ಕೆಲವು ಭಾಗಗಳನ್ನು ಹುಡುಕಿದ್ದರು, ಬಳಿಕ ಗಂಗಾವಳಿ ನದಿಯ ಆಳದಲ್ಲಿ ಮಣ್ಣು, ಕಲ್ಲಿನ ಅಡಿ ನುಜ್ಜುಗುಜ್ಜಾದ ಸ್ಥಿತಿಯಲ್ಲಿದ್ದ ಭಾರತ್ ಬೆಂಜ್ ಕಂಪನಿಯ ಲಾರಿಯೊಳಗೆ ಕೊಳೆತ ಸ್ಥಿತಿಯಲ್ಲಿ ಶವ ಸಿಕ್ಕಿದೆ. ಇದು ಅರ್ಜುನ್ ಅವರದ್ದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಖಚಿತಪಡಿಸಿದ್ದಾರೆ.

    ದುರ್ಘಟನೆಯಲ್ಲಿ ಶಿರೂರಿನ ಜಗನ್ನಾಥ ನಾಯ್ಕ, ಗಂಗೆಕೊಳ್ಳದ ಲೊಕೇಶ ನಾಯ್ಕ ಅವರನ್ನು ಪತ್ತೆ ಮಾಡಬೇಕಿದೆ. ಘಟನೆಯಲ್ಲಿ ಈವರೆಗೆ 9 ಮಂದಿ ಮೃತಪಟ್ಟಿದ್ದಾರೆ.]

     

    Share Information
    Advertisement
    Click to comment

    You must be logged in to post a comment Login

    Leave a Reply