Connect with us

JYOTHISHYA

‘ಕಾಂತಾರ ಚಾಪ್ಟರ್ 1’ ಸಿನೆಮಾಗೆ ಮತ್ತೊಂದು ಶಾಕ್ : ಅನುಮತಿ ಇಲ್ಲದೆ ಚಿತ್ರೀಕರಣ ನಡೆಸಿದ್ದಕ್ಕೆ ನೋಟಿಸ್ ಜಾರಿ!

ಶಿವಮೊಗ್ಗ, ಜೂನ್ 15: ಕಾಂತಾರ ಚಾಪ್ಟರ್ 1 ಸಿನಿಮಾ ಶೂಟಿಂಗ್ ನಡೆಸುವ ಆರಂಭದ ದಿನದಿಂದಲೂ ಹಲವಾರು ದುರಂತಗಳು ನಡೆದಿದೆ. ಈಗಾಗಲೇ ಚಿತ್ರತಂಡದ ಮೂರು ಕಲಾವಿದರು ಸಾವನ್ನಪ್ಪಿದ್ದು, ನಿನ್ನೆ ತಾನೆ ಶೂಟಿಂಗ್ ಮಾಡುವಾಗ ಹಡಗು ಮಗುಚಿ ಬಿದ್ದಿದ್ದು, ಚಿತ್ರದ ನಾಯಕರು ರಿಷಬ್ ಶೆಟ್ಟಿ ಸೇರಿದಂತೆ 30 ಕಲಾವಿದರು ಸೇಫ್ ಆಗಿದ್ದಾರೆ.

ಇದೀಗ ಕಾಂತಾರ ಚಿತ್ರ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದ್ದು ಶಿವಮೊಗ್ಗ ಜಿಲ್ಲಾ ಆಡಳಿತದಿಂದ ಚಿತ್ರಿಕರಣಕ್ಕೆ ಅನುಮತಿ ಪಡೆಯದಿದ್ದರಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗಡೆಯವರು ನೋಟಿಸ್ ನೀಡಿ ಉತ್ತರ ನೀಡುವಂತೆ ತಿಳಿಸಿದ್ದಾರೆ.

ಹೌದು ಅನುಮತಿ ಪಡೆಯದೆ ಕಾಂತಾರ ಸಿನಿಮಾ ಶೂಟಿಂಗ್ ನಡೆಸುತ್ತಿದ್ದು, ಸ್ಥಳೀಯ ಆಡಳಿತದಿಂದ ಅನುಮತಿ ಇಲ್ಲದೆ ಕಾಂತರಾ ಸಿನಿಮಾ ಶೂಟಿಂಗ್ ನಡೆಸುತ್ತಿದ್ದಾರೆ. ಹಾಗಾಗಿ ಚಿತ್ರತಂಡಕ್ಕೆ ನೋಟಿಸ್ ನೀಡುವುದಕ್ಕೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಶಿವಮೊಗ್ಗದ ಜಿಲ್ಲಾಧಿಕಾರಿ ಗುರುದತ್ ಹೆಗ್ಡೆ ಸೂಚನೆ ನೀಡಿದ್ದಾರೆ. ಮಾಸ್ತಿಕಟ್ಟೆ ಮಾಣಿ ಡ್ಯಾಮ್ ಬಳಿ ಕಾಂತಾರ ಚತ್ರಿಕರಣ ನಡೆಯುತ್ತಿದ್ದು, ತಹಶೀಲ್ದಾರ್ ರಶ್ಮಿ ಮೂಲಕ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ನೋಟಿಸ್ ಗೆ ಉತ್ತರ ನೀಡಿರುವ ಕಾಂತಾರ ಚಿತ್ರತಂಡವು ಬೆಂಗಳೂರಿನಿಂದ ಅನುಮತಿ ಪಡೆದಿದ್ದೇವೆ ಅಂತ ಚಿತ್ರಕಂಡ ಹೇಳಿಕೆ ನೀಡಿದೆ. ಆದರೆ ಸ್ಥಳೀಯ ಆಡಳಿತದಿಂದ ಅನುಮತಿ ಪಡೆದಿಲ್ಲ ಎಂದು ಉತ್ತರಿಸಿದ್ದಾರೆ. ಬೆಂಗಳೂರಿನಿಂದ ಅನುಮತಿ ಪಡೆದರು ಸಹ ಯಾವುದೇ ಪ್ರದೇಶದಲ್ಲಿ ಚಿತ್ರೀಕರಣ ನಡೆಸಬೇಕಾದರೆ ಅಲ್ಲಿಯ ಸ್ಥಳೀಯ ಆಡಳಿತದ ಅನುಮತಿ ಪಡೆಯಬೇಕು ಎಂಬ ನಿಯಮವಿದೆ ಹಾಗಾಗಿ ಇದೀಗ ಕಾಂತಾರ ಚಿತ್ರಕ್ಕೆ ಜಿಲ್ಲಾಧಿಕಾರಿಗಳು ನೋಟಿಸ್ ನೀಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *