DAKSHINA KANNADA
ಕುಂಬಳೆ – ಶ್ರೀ ಅನಂತಪದ್ಮನಾಭ ದೇವಸ್ಥಾನದ ಶ್ರೀ ಅನಂತ ಪಾಕಶಾಲೆ ಲೋಕಾರ್ಪಣೆ

ಕುಂಬಳೆ ಜೂನ್ 17: ಇತಿಹಾಸ ಪ್ರಸಿದ್ದ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಭಕ್ತಾಧಿಗಳಿಗೆ ಅನ್ನಪ್ರಸಾದ ವಿತರಣೆಗೆ ಸುಸಜ್ಜಿತ ಪಾಕಶಾಲೆಯಾದ ಶ್ರೀ ಅನಂತ ಪಾಕಶಾಲೆ ಲೋಕಾರ್ಪಣೆ ಕಾರ್ಯಕ್ರಮ ಜೂನ್ 16 ರಂದು ನಡೆದಿದೆ.
ಕೇರಳದ ಸರೋವರ ಏಕೈಕ ದೇವಸ್ಥಾನವಾಗಿರುವ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯ. ಈ ದೇವಸ್ಥಾನ ತಿರುವನಂತಪುರದ ಶ್ರೀ ಪದ್ಮನಾಭ ಸ್ವಾಮಿ ದೇವಾಲಯದ ಮೂಲಸ್ಥಾನ ಎಂದು ಕರೆಯಲ್ಪಡುತ್ತದೆ. ಭಾರೀ ಪ್ರಸಿದ್ಧಿ ಪಡೆದಿದ್ದ ಬಬಿಯಾ ಎಂಬ ಹೆಸರಿನ ದೇವರ ಮೊಸಳೆ ಇದೇ ದೇವಸ್ಥಾನದಲ್ಲಿರುವುದು.

ಈ ದೇವಸ್ಥಾನದಲ್ಲಿ ಪ್ರತಿನಿತ್ಯ ಭಕ್ತರಿಗೆ ಅನ್ನಪ್ರಸಾದ ವಿತರಣೆ ನಡೆಯುತ್ತಿದ್ದು, ಇದಕ್ಕಾಗಿ ಇದೀಗ ಸುಸಜ್ಜಿತ ಪಾಕಶಾಲೆಯನ್ನು ನಿರ್ಮಿಸಲಾಗಿದೆ. ಭಕ್ತರು ಮತ್ತು ದೇವಸ್ವಂ ಬೋರ್ಡ್ ನ ಧನಸಹಾಯದೊಂದಿಗೆ ಈ ಪಾಕಶಾಲೆಯನ್ನು ನಿರ್ಮಿಸಲಾಗಿದೆ. ಜೂನ್ 16 ರಂದು ಈ ಶ್ರೀ ಅನಂತ ಪಾಕಶಾಲೆಯನ್ನು ಕ್ಷೇತ್ರದ ತಂತ್ರಿಗಳಾದ ದೇಲಂಪಾಡಿ ಶ್ರೀ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಲೋಕಾರ್ಪಣೆಗೊಂಡಿದೆ.