Connect with us

    DAKSHINA KANNADA

    ಯಾರ್ರೀ ಕಲ್ಲಡ್ಕ ಪ್ರಭಾಕರ್ ಭಟ್, ಕಲ್ಲಡ್ಕ ವಿರುದ್ಧ ಕಿಡಿ ಕಾರಿದ ಅಮಿನ್ ಮಟ್

    ಯಾರ್ರೀ ಕಲ್ಲಡ್ಕ ಪ್ರಭಾಕರ್ ಭಟ್, ಕಲ್ಲಡ್ಕ ವಿರುದ್ಧ ಕಿಡಿ ಕಾರಿದ ಅಮಿನ್ ಮಟ್

    ಮಂಗಳೂರು,ಜನವರಿ 30: ಮುಗ್ದ ಯುವಕರನ್ನು ಬಲಿಕೊಡುವಂತಹ ಮೆದುಳುಗಳು ಕಲ್ಲಡ್ಕ, ನಾಗಪುರ ಹಾಗೂ ಕೇಶವ ಕೃಪಾದಲ್ಲಿವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಹೇಳಿದರು.


    ಮಂಗಳೂರಿನಲ್ಲಿ ವಿವಿಧ ಪ್ರಗತಿಪರ ಹಾಗೂ ಜ್ಯಾತ್ಯಾತೀತ ಸಂಘಟನೆಗಳು ಆಯೋಜಿಸಿದ ಸೌಹಾರ್ದತೆಗಾಗಿ ಮಾನವ ಸರಪಳಿ ಕಾರ್ಯಕ್ರಮವನ್ನು ಉದ್ಧೇಶಿಸಿ ಅವರು ಮಾತನಾಡಿದರು.

    ಗಾಂಧೀಜಿಯನ್ನು ಕೊಂದದ್ದು ಸರಿ ಎನ್ನುವ ಜನರು ಈ ಸಮಾಜದಲ್ಲಿದ್ದಾರೆ.

    ಹೀಗಾಗಿ ಇದು ಶಾಂತಿಯ ಕಾಲವಲ್ಲ , ಯುದ್ಧದ ಕಾಲ ಎಂದ ಅವರು ಯಾರ್ರೀ ಪ್ರಭಾಕರ್ ಭಟ್.

    ನಮ್ಮ ಜನ ಆ ವ್ಯಕ್ತಿಯ ಹೆಸರು ಹೇಳಲು ಭಯ ಪಡುತ್ತಿದ್ದಾರೆ.

    ಕಾಂಗ್ರೇಸ್ ನಾಯಕರು ಅವರನ್ನು ವೇದಿಕೆಯಲ್ಲಿ ಕೂರಿಸಿ ಕಣ್ಣೀರು ಹಾಕುತ್ತಿದ್ದಾರೆ.

    ಮುಗ್ದ ಬಿಲ್ಲವ ಯುವಕರನ್ನು ಬಲಿ ಕೊಡುವಾಗ ಈ ನಾಯಕರಿಗೆ ಕಣ್ಣೀರು ಬರಲಿಲ್ಲವೇ ಎಂದು ಅವರು ಕಾಂಗ್ರೇಸ್ ಮುಖಂಡ ಬಿ. ಜನಾರ್ಧನ ಪೂಜಾರಿಯವರ ಹೆಸರೆತ್ತದೆ ಪರೋಕ್ಷ ವಾಗ್ದಾಳಿ ನಡೆಸಿದರು.

    ಯುವಕರನ್ನು ಬಿಲಿ ಕೊಡುವಂತಹ ಮೆದುಳುಗಳು ಕಲ್ಲಡ್ಕ, ನಾಗಪುರ ಹಾಗೂ ಕೇಶವ ಕೃಪಾದಲ್ಲಿದೆ. ನಮ್ಮ ನಾಯಕರು ಎನಿಸಿಕೊಂಡವರು ಯುವಕರ ಮೆದುಳನ್ನು ಸ್ವಚ್ಛಗೊಳಿಸಲು ಮುಂದಾಗುತ್ತಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

    ಮುಂದಿನ ಚುನಾವಣೆಗಾಗಿ ಮತ ಕೇಳಲು ದೇವರ ಹೆಸರು ಹೇಳಿಕೊಂಡು ಬರುವವರನ್ನು ಒದ್ದೋಡಿಸಿ ಎಂದು ಅವರು ಇದೇ ಸಂದರ್ಭದಲ್ಲಿ ಜನತೆಗೆ ಮನವಿಯನ್ನೂ ಮಾಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply