KARNATAKA
ಸಂಸದ ತೇಜಸ್ವಿ ಸೂರ್ಯಾರನ್ನು ಉಗ್ರ ಅಜ್ಮಲ್ ಕಸಬ್ಗೆ ಹೋಲಿಸಿದ ನಟ ಸಿದ್ದಾರ್ಥ್!
ಚೆನ್ನೈ, ಮೇ 07: ಬಹುಭಾಷಾ ನಟ ಸಿದ್ದಾರ್ಥ್ ಅವರು ಬೆಂಗಳೂರು ದಕ್ಷಿಣ ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯಾ ಅವರನ್ನು, ಗಲ್ಲು ಶಿಕ್ಷೆಗೆ ಗುರಿಯಾಗಿ ಸತ್ತಿರುವ ಉಗ್ರ ಅಜ್ಮಲ್ ಕಸಬ್ಗೆ ಹೋಲಿಸಿ ವಿವಾದ ಸೃಷ್ಟಿಸಿದ್ದಾರೆ. ಅವರು ಇಂದು ಮಾಡಿದ್ದ ಟ್ವೀಟ್ ವೈರಲ್ ಆಗುತ್ತಿದ್ದಂತೆ ಆ ಟ್ವೀಟ್ನ್ನು ಡಿಲೀಟ್ ಮಾಡಿದ್ದಾರೆ.
ಕರೊನಾ ವಿಷಯವಾಗಿ ಬೆಂಗಳೂರು ಬಿಬಿಎಂಪಿ ವಾರ್ರೂಮ್ನಲ್ಲಿ ನಡೆಯುತ್ತಿದೆ ಎನ್ನಲಾದ ಬೆಡ್ ಹಗರಣದ ಬಗ್ಗೆ ತೇಜಸ್ವಿ ಸೂರ್ಯ ಗಮನ ಸೆಳೆದು, ವಾರ್ರೂಮ್ನಲ್ಲಿ ಹೆಚ್ಚು ಮುಸ್ಲಿಂರೇ ಕೆಲಸ ಮಾಡುತ್ತಿದ್ದಾರೆ, ಇದನ್ನೇನು ಮದರಸಾ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದರು.
@Tejasvi_Surya is far more dangerous and just a decade older than #AjmalKasab.
Save this tweet. It will unfortunately age well.
— Siddharth (@Actor_Siddharth) May 5, 2021
ಈ ಬಗ್ಗೆ ಪರ ವಿರೋಧದ ಚರ್ಚೆಗಳು ಆರಂಭವಾಗಿದ್ದವು. ಇದನ್ನು ಖಂಡಿಸುವ ಭರದಲ್ಲಿ ನಟ ಸಿದ್ದಾರ್ಥ್ ಅವರು ‘ಅಜ್ಮಲ್ ಕಸಬ್ಗಿಂತ ಹತ್ತು ವರ್ಷ ಚಿಕ್ಕವನಾದ ತೇಜಸ್ವಿ ಸೂರ್ಯ ಕಸಬ್ಗಿಂತೂ ಅಪಾಯಕಾರಿ’ ಎಂದು ಟ್ವೀಟ್ ಮಾಡಿದ್ದರು. ಒಬ್ಬ ಜನಪ್ರತಿನಿಧಿಯನ್ನು ಉಗ್ರನಿಗೆ ಹೋಲಿಸಿ ಮಾತನಾಡಿದ್ದಕ್ಕೆ ನೆಟ್ಟಿಗರು ಸಿದ್ದಾರ್ಥರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ಎಚ್ಚೆತ್ತುಕೊಂಡು ಸಿದ್ದಾರ್ಥ್ ತಮ್ಮ ವಿವಾದಾತ್ಮಕ ಟ್ವೀಟ್ನ್ನು ಅಳಿಸಿ ಹಾಕಿದ್ದಾರೆ.
You must be logged in to post a comment Login