Connect with us

    KARNATAKA

    ಸಂಸದ ತೇಜಸ್ವಿ ಸೂರ್ಯಾರನ್ನು ಉಗ್ರ ಅಜ್ಮಲ್ ಕಸಬ್​ಗೆ ಹೋಲಿಸಿದ ನಟ ಸಿದ್ದಾರ್ಥ್!

    ಚೆನ್ನೈ, ಮೇ 07: ಬಹುಭಾಷಾ ನಟ ಸಿದ್ದಾರ್ಥ್ ಅವರು ಬೆಂಗಳೂರು ದಕ್ಷಿಣ ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯಾ ಅವರನ್ನು, ಗಲ್ಲು ಶಿಕ್ಷೆಗೆ ಗುರಿಯಾಗಿ ಸತ್ತಿರುವ ಉಗ್ರ ಅಜ್ಮಲ್ ಕಸಬ್​ಗೆ ಹೋಲಿಸಿ ವಿವಾದ ಸೃಷ್ಟಿಸಿದ್ದಾರೆ. ಅವರು ಇಂದು ಮಾಡಿದ್ದ ಟ್ವೀಟ್ ವೈರಲ್ ಆಗುತ್ತಿದ್ದಂತೆ ಆ ಟ್ವೀಟ್​ನ್ನು ಡಿಲೀಟ್ ಮಾಡಿದ್ದಾರೆ.

    ಕರೊನಾ ವಿಷಯವಾಗಿ ಬೆಂಗಳೂರು ಬಿಬಿಎಂಪಿ ವಾರ್​ರೂಮ್​​ನಲ್ಲಿ ನಡೆಯುತ್ತಿದೆ ಎನ್ನಲಾದ ಬೆಡ್ ಹಗರಣದ ಬಗ್ಗೆ ತೇಜಸ್ವಿ ಸೂರ್ಯ ಗಮನ ಸೆಳೆದು, ವಾರ್​ರೂಮ್​ನಲ್ಲಿ ಹೆಚ್ಚು ಮುಸ್ಲಿಂರೇ ಕೆಲಸ ಮಾಡುತ್ತಿದ್ದಾರೆ, ಇದನ್ನೇನು ಮದರಸಾ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದರು.

    ಈ ಬಗ್ಗೆ ಪರ ವಿರೋಧದ ಚರ್ಚೆಗಳು ಆರಂಭವಾಗಿದ್ದವು. ಇದನ್ನು ಖಂಡಿಸುವ ಭರದಲ್ಲಿ ನಟ ಸಿದ್ದಾರ್ಥ್ ಅವರು ‘ಅಜ್ಮಲ್ ಕಸಬ್​ಗಿಂತ ಹತ್ತು ವರ್ಷ ಚಿಕ್ಕವನಾದ ತೇಜಸ್ವಿ ಸೂರ್ಯ ಕಸಬ್​ಗಿಂತೂ ಅಪಾಯಕಾರಿ’ ಎಂದು ಟ್ವೀಟ್ ಮಾಡಿದ್ದರು. ಒಬ್ಬ ಜನಪ್ರತಿನಿಧಿಯನ್ನು ಉಗ್ರನಿಗೆ ಹೋಲಿಸಿ ಮಾತನಾಡಿದ್ದಕ್ಕೆ ನೆಟ್ಟಿಗರು ಸಿದ್ದಾರ್ಥರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ಎಚ್ಚೆತ್ತುಕೊಂಡು ಸಿದ್ದಾರ್ಥ್ ತಮ್ಮ ವಿವಾದಾತ್ಮಕ ಟ್ವೀಟ್​ನ್ನು ಅಳಿಸಿ ಹಾಕಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply