BELTHANGADI
ಬೆಳ್ತಂಗಡಿ – 4 ನೇ ತರಗತಿಯ ಬಾಲಕಿಯ ಪ್ರಾಣ ತೆಗೆದ ಬೋಲೆರೊ
ಬೆಳ್ತಂಗಡಿ ಜುಲೈ 28: ಬೈಕ್ ಗೆ ಹಿಂದಿನಿಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಬಾಲಕಿ ಸಾವನಪ್ಪಿದ ಘಟನೆ ಮುಂಡಾಜೆಯಲ್ಲಿ ಶನಿವಾರ ನಡೆದಿದೆ. ಬೈಕ್ ಚಲಾಯಿಸುತ್ತಿದ್ದ ತಂದೆ ಗಂಭೀರ ಗಾಯಗೊಂಡಿದ್ದಾರೆ.
ಉಜಿರೆ ಖಾಸಗಿ ಆಂಗ್ಲಮಾಧ್ಯಮ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಅನರ್ಘ್ಯ (10) ಪ್ರಾಣ ಕಳೆದುಕೊಂಡವರು. ಉಜಿರೆ ಮನೆಯಿಂದ ಕಲ್ಮಂಜ ಗ್ರಾಮದ ಕುಡೆಂಚಿಯ ಮೂಲ ಮನೆಗೆ ಹೋಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಸೀಟಿನ ಬಳಿ ಡಿಕ್ಕಿ ಆಗಿದೆ. ಬಾಲಕಿ ಬೆಳ್ತಂಗಡಿ ಆಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯೆ ಮೃತಪಟ್ಟಿದ್ದಾರೆ. ತಂದೆ ಗುರುಪ್ರಸಾದ್ ಉಜಿರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ಬಳಿಕ ವಾಹನ ನಿಲ್ಲಿಸದೆ ಚಾಲಕ ಪರಾರಿಯಾಗಿದ್ದ. ಸೀಟು-ಕಾಯರ್ತೋಡಿ ರಸ್ತೆಯತ್ತ ಸಾಗಿದ್ದ ವಿಷಯ ತಿಳಿದ ಊರವರು ಹಾಗೂ ವಿದ್ಯುತ್ ಲೈನ್ ಕೆಲಸ ಮಾಡುತ್ತಿದ್ದವರು ವಾಹನ ತಡೆದು ನಿಲ್ಲಿಸಿ ಅದರಲ್ಲಿದ್ದವರನ್ನು ಪೊಲೀಸರಿಗೊಪ್ಪಿಸಿದ್ದಾರೆ.
You must be logged in to post a comment Login