Connect with us

LATEST NEWS

ಮೀನು ಕಚ್ಚಿದ ಪರಿಣಾದ ಕೈಯನ್ನೇ ಕಳೆದುಕೊಂಡ ವ್ಯಕ್ತಿ – ಕೇರಳದಲ್ಲಿ ನಡೆದ ಅಪರೂಪದ ಘಟನೆ

ಕೇರಳ ಮಾರ್ಚ್ 14: ತೋಟದಲ್ಲಿದ್ದ ಸಣ್ಣ ಕೊಳದಲ್ಲಿದ್ದ ಮೀನನ್ನು ಹಿಡಿಯುವ ವೇಳೆ ಅದು ಕಚ್ಚಿದ ಪರಿಣಾಮ ವ್ಯಕ್ತಿಯೊಬ್ಬ ತನ್ನ ಕೈಯನ್ನೇ ಕಳೆದುಕೊಂಡ ಘಟನೆ ಕೇರಳದ ಥಲಸ್ಸೇರಿಯ ಮದಪೇಡಿಕಾ ಎಂಬಲ್ಲಿ ನಡೆದಿದೆ. ಕೇರಳದ ಥಲಸ್ಸೇರಿಯ ಮದಪೇಡಿಕಾ ಎಂಬಲ್ಲಿ ಹೈನುಗಾರಿಕೆ ನಡೆಸುತ್ತಿದ್ದ 38 ವರ್ಷದ ರಾಜೇಶ್​ ಎಂಬವರಿಗೆ ಮೀನು ಕಡಿದು ಉಂಟಾದ ಗಾಯದಿಂದಾಗಿ ದೇಹ ಹೊಕ್ಕ ಸೋಂಕಿನ ಪರಿಣಾಮ ಅವರ ಬಲ ಮುಂಗೈಯನ್ನೇ ಇದೀಗ ಕತ್ತರಿಸಲಾಗಿದೆ.


ಫೆಬ್ರವರಿಯಲ್ಲಿ ರಾಜೇಶ್ ತಮ್ಮ ತೋಟದಲ್ಲಿದ್ದ ಸಣ್ಣ ಕೊಳದಲ್ಲಿದ್ದ ಕೇರಳದಲ್ಲಿ ಕಡು ಎಂದು ಕರೆಯಲ್ಪಡು ಮೀನನ್ನು ಹಿಡಿಯಲು ಹೋಗಿದ್ದಾರೆ. ಈ ವೇಳೆ ಮೀನಿನಿಂದಾಗಿ ರಾಜೇಶ್ ಅವರ ಬೆರಳ ತುದುಯಲ್ಲಿ ಸಣ್ಣ ಗಾಯವಾಗಿದೆ. ಆರಂಭದಲ್ಲಿ ನಿರ್ಲಕ್ಷಿಸಿದರೂ ದಿನವಿಡೀ ನೋವು ಉಂಟಾದ ಕಾರಣ ತಕ್ಷಣಕ್ಕೆ ಪಲ್ಲೂರ್​ನ ಸರ್ಕಾರಿ ಆಸ್ಪತ್ರೆಗೆ ಹೋಗಿ ವೈದ್ಯರನ್ನು ಭೇಟಿ ಮಾಡಿದ್ದಾರೆ. ಚಿಕಿತ್ಸೆಯ ಬಳಿಕವೂ ನೋವು ಕಡಿಮೆಯಾಗಲಿಲ್ಲ. ಅಂಗೈವರೆಗೂ ಗುಳ್ಳೆಗಳು ಏಳಲು ಶುರುವಾಗಿದೆ.


ಇದರಿಂದ ಗಾಬರಿಗೊಂಡ ರಾಜೇಶ್​, ಮಾಹೆಯಲ್ಲಿನ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದಾರೆ. ಈ ವೇಳೆ ಅವರನ್ನು ಪರೀಕ್ಷಿಸಿದ ವೈದ್ಯರಿಗೆ ಸೋಂಕಿಗೆ ಕಾರಣವೇನು ಎಂಬುದನ್ನು ತಕ್ಷಣಕ್ಕೆ ತಿಳಿಯಲು ಸಾಧ್ಯವಾಗಲಿಲ್ಲ. ಇಲ್ಲೂ ಪರಿಹಾರ ಕಾಣದ ರಾಜೇಶ್, ಕೋಝಿಕ್ಕೋಡ್​ನ ಬೇಬಿ ಮೆಮೋರಿಯಲ್​ ಆಸ್ಪತ್ರೆಗೆ ದಾಖಲಾದರು. ಅಲ್ಲಿ ಅವರನ್ನು ಪರೀಕ್ಷೆಗೊಳಪಡಿಸಿದ ವೈದ್ಯರು, ಅಪರೂಪದ ಗ್ಯಾಸ್​ ಗ್ಯಾಂಗ್ರೀನ್​ ಆಗಿರುವುದನ್ನು ಪತ್ತೆ ಮಾಡಿದ್ದಾರೆ.

ಗ್ಯಾಸ್ ಗ್ಯಾಂಗ್ರೀನ್, ಅಂಗಾಂಶಗಳನ್ನು ನಾಶಪಡಿಸುವ ಮತ್ತು ಅದರೊಳಗೆ ಅನಿಲವನ್ನು ಉತ್ಪಾದಿಸುವ ತೀವ್ರ ಮತ್ತು ಮಾರಣಾಂತಿಕ ಬ್ಯಾಕ್ಟೀರಿಯಾ ಆಗಿದೆ. ಕೆಸರು ಮತ್ತು ಮರಳಿನ ನೀರಿನಲ್ಲಿ ಕಂಡುಬರುವ ಕ್ಲೋಸ್ಟ್ರಿಡಿಯಮ್ ಪರ್ಫ್ರಿಂಜನ್ಸ್ ಎಂಬ ಬ್ಯಾಕ್ಟೀರಿಯಾ ಇದಕ್ಕೆ ಕಾರಣವಾಗಿದೆ. ಗ್ಯಾಂಗ್ರೀನ್​ನಿಂದಾಗಿ ಮೊದಲಿಗೆ ರಾಜೇಶ್‌ರ ಎರಡು ಬೆರಳುಗಳನ್ನು ಕತ್ತರಿಸಲಾಯಿತು. ಆದರೆ, ಅವರ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಾಣದೇ ಸೋಂಕು ಹರಡುತ್ತಿದ್ದ ಹಿನ್ನೆಲೆಯಲ್ಲಿ ಮುಂಗೈಯನ್ನು ಕತ್ತರಿಸುವ ಪರಿಸ್ಥಿತಿ ನಿರ್ಮಾಣವಾಯಿತು. ಸೋಂಕು ಅಂಗೈಗೆ ಹರಡಿ ಕ್ರಮೇಣ ಮಿದುಳನ್ನು ಹಾಳುಮಾಡುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಮುಂಗೈ ಕತ್ತರಿಸದೇ ಬೇರೆ ದಾರಿ ಇರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸಣ್ಣ ಮೀನೊಂದು ಪ್ರಗತಿಪರ ಕೃಷಿಕನಾಗಿದ್ದ ರಾಜೇಶ್ ಅವರ ಜೀವನವನ್ನೇ ಸಂಕಷ್ಟಕ್ಕೆ ಸಿಲುಕಿಸಿದೆ.

Share Information
Continue Reading
Advertisement
1 Comment

1 Comment

    Leave a Reply

    Your email address will not be published. Required fields are marked *