Connect with us

LATEST NEWS

ಸಿರಿಬಾಗಿಲು ಗುಡ್ಡದಲ್ಲಿ ಹಳಿಗೆ ಕುಸಿದ ಕಲ್ಲು ಬಂಡೆ ರೈಲು ಸಂಚಾರದಲ್ಲಿ ಅಡಚಣೆ

ಸಿರಿಬಾಗಿಲು ಗುಡ್ಡದಲ್ಲಿ ಹಳಿಗೆ ಕುಸಿದ ಕಲ್ಲು ಬಂಡೆ ರೈಲು ಸಂಚಾರದಲ್ಲಿ ಅಡಚಣೆ

ಮಂಗಳೂರು ಜುಲೈ 3: ಮಂಗಳೂರು-ಬೆಂಗಳೂರು ರೈಲ್ವೇ ಸಂಚಾರ ಸ್ಥಗಿತ ಹಿನ್ನಲೆ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡಲಾಗಿದ್ದು ಪುತ್ತೂರಿನಿಂದ ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಿರಿಬಾಗಿಲು ಬಳಿ ಗುಡ್ಡದ ಕಲ್ಲು ಬಂಡೆ ರೈಲ್ವೆ ಮೇಲೆ ಕುಸಿದ ಹಿನ್ನಲೆ ಮಂಗಳೂರು ಬೆಂಗಳೂರು ರೈಲು ಸಂಚಾರ ಸ್ಥಗಿತಗೊಂಡಿತ್ತು.

ಬೆಳಿಗ್ಗೆ ಹೊರಟ ರೈಲು ಸುಬ್ರಹ್ಮಣ್ಯದಲ್ಲಿ ನಿಲುಗಡೆಯಾಗಿತ್ತು. ಈ ಹಿನ್ನಲೆಯಲ್ಲಿ ರೈಲನ್ನು ಪುತ್ತೂರು ನಿಲ್ದಾಣಕ್ಕೆ ತಂದು ಪ್ರಯಾಣಿಕರಿಗೆ ಬೆಂಗಳೂರು ತಲುಪಲು ಬಸ್ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಕಲ್ಪಿಸಿದೆ.

ರೈಲ್ವೆ ಸೇತುವೆ ಮೇಲೆ ಗುಡ್ಡ ಕುಸಿದಿರುವ ಹಿನ್ನಲೆಯಲ್ಲಿ ಮಾರ್ಗಮಧ್ಯೆ ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿದ್ದ ರೈಲು ಸಿಲುಕಿದೆ. ಬೆಳಿಗ್ಗೆ 11 ಗಂಟೆಗೆ ಸಕಲೇಶಪುರದಿಂದ ಹೊರಟಿದ್ದ ರೈಲು ಕಾಡಿನ ನಡುವಿನ ಮಾರ್ಗದಲ್ಲಿ ನಿಲುಗಡೆಯಾಗಿತ್ತು.

ಮಂಗಳೂರಿನಿಂದ 11 ಗಂಟೆಗೆ ಹೊರಟಿದ್ದ ರೈಲು ಸುಬ್ರಹ್ಮಣ್ಯದಲ್ಲಿ‌ ನಿಲುಗಡೆಯಾಗಿತ್ತು. ಗುಡ್ಡ ಕುಸಿತ ತೆರವು ಕಾರ್ಯಾಚರಣೆಗೆ ಸಕಲೇಶಪುರದಿಂಗ ತಂಡ ಹೊರಟಿದ್ದು ಕಾರ್ಯಾಚರಣೆ ಕೈಗೊಳ್ಳಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *