Connect with us

    DAKSHINA KANNADA

    ಪಾಣಾಜೆ: ಆಟವಾಡುತ್ತಿದ್ದ ಮೂರುವರೆ ವರ್ಷದ ಮಗು ಈಜುಕೊಳಕ್ಕೆ ಬಿದ್ದು ಮೃತ್ಯು

    ಪುತ್ತೂರು ಡಿಸೆಂಬರ್ 25 :ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮೂರುವರೆ ವರ್ಷದ ಪುಟ್ಟ ಬಾಲಕ ಸ್ಥಳೀಯ ತೋಟದಲ್ಲಿದ್ದ ಈಜು ಕೊಳದಲ್ಲಿ ಬಿದ್ದು ಮೃತಪಟ್ಟ ಬಗ್ಗೆ ಪಾಣಾಜೆ ಗ್ರಾಮದ ಅಪಿನಿಮೂಲೆ ಎಂಬಲ್ಲಿ ಡಿ.24ರಂದು ಸಂಜೆ ನಡೆದಿದೆ.


    ಅಪಿನಮೂಲೆ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಮತ್ತು ಆಶ್ಮಾ ದಂಪತಿಯ ಮೂರುವರೆ ವರ್ಷದ ಬಾಲಕ ಮಹಮ್ಮದ್ ಸಾನಿದ್ ಮೃತಪಟ್ಟವರು. ಡಿ.24ರಂದು ಸಂಜೆ ಮನೆಯ ವರಾಂಡದಲ್ಲಿ ಆಟವಾಡಿಕೊಂಡು ಇದ್ದ ಬಾಲಕ ಮನೆಯಲ್ಲಿ ಕಾಣಿಸದೇ ಇದ್ದಾಗ ಸುತ್ತಮುತ್ತ ಹುಡುಕಾಡಿದಾಗ ನೆರೆಯ ರಾಮ್ ಕುಮಾರ್‌ರವರ ತೋಟದ ಈಜು ಕೊಳದ ಬಳಿ ಬಂದಾಗ ಅದರ ನೀರಿನಲ್ಲಿ ಮಹಮ್ಮದ್ ಸಾನಿದ್ ಬಿದ್ದಿರುವುದು ಬೆಳಕಿಗೆ ಬಂದಿತ್ತು.ತಕ್ಷಣ ಬಾಲಕನನ್ನು ನೀರಿನಿಂದ ಮೇಲಕ್ಕೆತ್ತಿ ಪುತ್ತೂರು ಸರಕಾರಿ ಆಸ್ಪತ್ತೆಗೆ ಕರೆ ತಂದಾಗ ಬಾಲಕ ಮೃತಪಟ್ಟಿದ್ದನು.ಘಟನೆ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply