DAKSHINA KANNADA
ಅರ್ಥಪೂರ್ಣವಾಗಿ ಹುಟ್ಟು ಹಬ್ಬ ಆಚರಿಸಿದ ನಾಡೋಜ ಡಾ. ಜಿ ಶಂಕರ್, ಕ್ಯಾನ್ಸರ್ ಪೀಡಿತರಿಗೆ ಒಂದು ಕೋಟಿ ರೂಗಳ ಸಹಾಯ ಹಸ್ತ..!
ಮಂಗಳೂರು : ಕ್ಯಾನ್ಸರ್ ಪೀಡಿತರ ಸಂಕಷ್ಟಕ್ಕೆ ಸಾಥ್ ನೀಡುವ ಮೂಲಕ ತನ್ನ ಹುಟ್ಟು ಹಬ್ಬವನ್ನು ನಾಡೋಜ ಡಾ. ಜಿ .ಶಂಕರ್( Dr. G Shankar) ಅವರು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಇದರ ಪ್ರವರ್ತಕರು, ಸಮಾಜಮುಖಿ ಚಿಂತಕರು, ಉಡುಪಿ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಹಾಗೂ ದಸರಾ ಮಹೋತ್ಸವದ ಗೌರವ ಸಲಹೆಗಾರರಾಗಿರುವ ಮೊಗವೀರ ಸಮಾಜದ ಮುಂದಾಳು ಮಹಾದಾನಿ ನಾಡೋಜ ಡಾ. ಜಿ ಶಂಕರ್ ರವರ 69ನೇ ಹುಟ್ಟುಹಬ್ಬದ ಪ್ರಯುಕ್ತ ವೆನ್ಲೊಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು, ಹಾಗೂ ಮಂಗಳೂರಿನ ಎಮ್ ಐ ಓ ಆಸ್ಪತ್ರೆಯಲ್ಲಿ ಹಾಗೂ ಅತ್ತಾವರ ಕೆ ಎಂ ಸಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಕ್ಯಾನ್ಸರ್ ರೋಗಿಗಳಿಗೆ ಸುಮಾರು ಒಂದು ಕೋಟಿ ರೂಪಾಯಿಗಳಿಗೂ ಮೀರಿದ ಸಹಾಯ ಹಸ್ತವನ್ನು ಡಿಡಿ ಮೂಲಕ ಡಾಕ್ಟರ್ ನಾಡೋಜ ಜಿ. ಶಂಕರ್ ಅವರ ಸುಪುತ್ರಿ ಶ್ರೀಮತಿ ಶ್ಯಾಮಿಲಿ ನವೀನ್ ಅವರು ನೀಡಿದರು.
ಈ ಸಂದರ್ಭದಲ್ಲಿ ಜಿ ಶಂಕರ್ ಫ್ಯಾಮಿಲಿ ಟ್ರಸ್ಟಿನ ಎಸ್ ಕೆ ಆನಂದ್,ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿಸ್ಥಕರು ಮತ್ತು ಅಧಿಕ್ಷಕರು ಆಗಿರುವ ಡಾ. ಶಿವಪ್ರಕಾಶ್, ನಿವಾಸಿ ವೈದ್ಯಾಧಿಕಾರಿ ಡಾ. ಸುಧಾಕರ್, ಡಾಕ್ಟರ್ ಅಣ್ಣಯ್ಯ ಕುಲಾಲ್ ಹಾಗೂ ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಸ್ಥಾಪಕ ಅಧ್ಯಕ್ಷರಾಗಿರುವ ಕೊಲ್ಲಾಡಿ ಬಾಲಕೃಷ್ಣ ರೈ ,ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿರುವ ಬಿ ಶೇಷಪ್ಪ ಬಂಬಿಲ ಮತ್ತು ರತನ್ ಶೆಟ್ಟಿ ಉಪಸ್ಥಿತರಿದ್ದರು.
You must be logged in to post a comment Login