Connect with us

LATEST NEWS

ಶ್ರೀ ಕೃಷ್ಣಮಠಕ್ಕೆ ರಾಜಸ್ಥಾನ ಸಿಎಂ ವಸುಂಧರ ರಾಜೇ ದಿಢೀರ್ ಭೇಟಿ

ಶ್ರೀ ಕೃಷ್ಣಮಠಕ್ಕೆ ರಾಜಸ್ಥಾನ ಸಿಎಂ ವಸುಂಧರ ರಾಜೇ ದಿಢೀರ್ ಭೇಟಿ

ಉಡುಪಿ ನವೆಂಬರ್ 20: ಉಡುಪಿಯ ಕೊಲ್ಲೂರು ದೇವಸ್ಥಾನದ ಭೇಟಿಗಾಗಿ ಬಂದಿರುವ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರ ರಾಜೇ ಅವರು ಇಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದಾರೆ.

ಈ ಮೊದಲು ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿದ ರಾಜಸ್ಥಾನ ಮುಖ್ಯಮಂತ್ರಿಯವರನ್ನು ಕೊಲ್ಲೂರು ಆಡಳಿತ ಮಂಡಳಿ ಅದ್ಧೂರಿಯಿಂದ ಸ್ವಾಗತಿಸಲಾಯಿತು. ನಂತರ ದೇವಿ ದರ್ಶನ ಪಡೆದ ವಸುಂಧರಾ ರಾಜೆ ದೇವಸ್ಥಾನದಲ್ಲಿ ನಡೆಸಿದ ನವ ಚಂಡಿಯಾಗದಲ್ಲಿ ಭಾಗಿಯಾದರು.
ರಾಜಸ್ಥಾನ ಮುಖ್ಯಮಂತ್ರಿ ಯವರ ಅಧಿಕೃತ ಪ್ರವಾಸದ ಪ್ರಕಾರ ಅವರು ಕೊಲ್ಲೂರು ಭೇಟಿ ನಂತರ ಅಲ್ಲಿಂದ ವಾಪಾಸ್ ಹೋಗುವರಿದ್ದರು, ಆದರೆ ಸಿಎಂ ವಸುಂಧರ ರಾಜೆ ಅವರು ಕೃಷ್ಣ ಮಠಕ್ಕೆ ಅನರೀಕ್ಷಿತ ಭೇಟಿ ನೀಡಿದರು.

ಪೂರ್ವ ನಿಗಧಿಪಡಿಸದೆ ಉಡುಪಿಗೆ ರಾಜಸ್ಥಾನದ ಮುಖ್ಯಮಂತ್ರಿ ಆಗಮಿಸಿದ ಹಿನ್ನಲೆಯಲ್ಲಿ ಉಡುಪಿ ಪೊಲೀಸರು ದಿಢೀರ್ ಪೊಲೀಸ್ ಬಂದೋಬಸ್ತ್ ನಡೆಸಬೇಕಾಗಿ ಬಂದಿತ್ತು. ಕೊಲ್ಲೂರಿನಿಂದ ಉಡುಪಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ವಸುಂಧರ ರಾಜೆ ಅವರಿಗೆ ಉಡುಪಿ ಹೆಲಿಪ್ಯಾಡ್ ನಲ್ಲಿ ಪೊಲೀಸರು ತುರ್ತು ವ್ಯವಸ್ಥೆ ಮಾಡಿದ್ದರು.

ಶ್ರೀಕೃಷ್ಣ ಮಠಕ್ಕೆ ಬಂದ ರಾಜಸ್ಥಾನ ಸಿಎಂ ವಸುಂಧರ ರಾಜೆ ಅವರು ಶ್ರೀಕೃಷ್ಣನ ದರ್ಶನ ಪಡೆದರು. ಮಂತರ ಪರ್ಯಾಯ ಪೇಜಾವರ ಶ್ರೀಗಳ ಆಶೀರ್ವಾದ ಪಡೆದ ಸಿಎಂ ವಸುಂದರ ರಾಜೇ ಅವರು ಶ್ರೀಕೃಷ್ಣನ ವಿಶೇಷ ಪ್ರಸಾದ ಸ್ವೀಕರಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *