Connect with us

DAKSHINA KANNADA

ರಾಜಕೀಯ ಜೀವನದ ವಿಷ್ಯ, ಮೊಯಿದೀನ್ ಬಾವಾಗೆ ಕೋಡಿಮಠ ಸ್ವಾಮೀಜಿ ಭವಿಷ್ಯ

 

ರಾಜಕೀಯ ಜೀವನದ ವಿಷ್ಯ, ಮೊಯಿದೀನ್ ಬಾವಾಗೆ ಕೋಡಿಮಠ ಸ್ವಾಮೀಜಿ ಭವಿಷ್ಯ

ಮಂಗಳೂರು,ಜನವರಿ 19: ತನ್ನ ಕ್ಷೇತ್ರದಾದ್ಯಂತ ನಿರಂತರವಾಗಿ ನಡೆಯುತ್ತಿರುವ ಅಹಿತಕರ ಘಟನೆಗಳು ರಾಜಕೀಯದ ಮೇಲೆ ಪರಿಣಾಮ ಬೀರಲಿದೆಯೇ ಎನ್ನುವ ಭವಿಷ್ಯ ಕೇಳಲು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯಿದೀನ್ ಬಾವಾ ಭವಿಷ್ಯವಾಣಿ ನುಡಿಯುವ ಕೋಡಿಮಠದ ಶಿವಯೋಗಿ ಶಿವಾನಂದ ರಾಜೇಂದ್ರ ಮಹಾಸ್ವಾಮಿಯನ್ನು ಭೇಟಿ ಮಾಡಿದ್ದಾರೆ.

ಮೊಯಿದೀನ್ ಬಾವಾರ ಕ್ಷೇತ್ರವಾದ ಸುರತ್ಕಲ್ ನಲ್ಲಿ ಇತ್ತೀಚಿನ ದಿನಗಳಲ್ಲಿ ಕೋಮ ಸಂಘರ್ಷಗಳು ಸೇರಿದಂತೆ ಹಲವು ಅಹಿತಕರ ಘಟನೆಗಳು ಹೆಚ್ಚಾಗುತ್ತಿದೆ.

ಇದು ತನ್ನ ರಾಜಕೀಯ ಜೀವನದ ಮೇಲೆ ಪ್ರಭಾವ ಬೀರಲಿದೆಯೇ ಎನ್ನುವ ಆತಂಕದಲ್ಲಿ ಶಾಸಕರು ಭವಿಷ್ಯವಾಣಿಯ ಸ್ವಾಮೀಜಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಸ್ವಾಮೀಜಿ ಮೊಯಿದೀನ್ ಬಾವಾರ ರಾಜಕೀಯದ ಮೇಲಾಗುವ ಪರಿಣಾಮದ ಕುರಿತು ಗಂಭೀರ ವಿಚಾರಗಳನ್ನು ತಿಳಿಸಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

ಸುರತ್ಕಲ್ ನ ಕಾಟಿಪಳ್ಳ ಪರಿಸರದಲ್ಲಿ ಇತ್ತೀಚೆಗೆ ನಡೆದ ದೀಪಕ್ ರಾವ್ ಕೊಲೆಯ ಬಳಿಕ ಕೊಂಚ ವಿಚಲಿತಗೊಂಡಿರುವ ಮೊಯಿದೀನ್ ಬಾವಾ ಇದೀಗ ಸ್ವಾಮೀಜಿಗಳ ಬಳಿ ತೆರಳುತ್ತಿದ್ದಾರೆ ಎನ್ನುವ ಆರೋಪಗಳನ್ನು ಇದೀಗ ಅವರ ವಿರೋಧಿಗಳು ಮಾಡುತ್ತಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *