Connect with us

LATEST NEWS

ರಮಾನಾಥ ರೈ ಸಾಮರಸ್ಯ ನಡಿಗೆಗೆ ಆರಂಭದಲ್ಲೇ ವಿಘ್ನ – ಫರಂಗಿಪೇಟೆಯಲ್ಲಿ ಬಸ್ ಗಳಿಗೆ ಕಲ್ಲು

ರಮಾನಾಥ ರೈ ಸಾಮರಸ್ಯ ನಡಿಗೆಗೆ ಆರಂಭದಲ್ಲೇ ವಿಘ್ನ – ಫರಂಗಿಪೇಟೆಯಲ್ಲಿ ಬಸ್ ಗಳಿಗೆ ಕಲ್ಲು

ಮಂಗಳೂರು ಡಿಸೆಂಬರ್ 12: ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಆರಂಭಿಸಿರುವ ಸಾಮರಸ್ಯ ನಡಿಗೆಗೆ ಆರಂಭದಲ್ಲೇ ವಿಘ್ನವಾಗಿದೆ. ಸಾಮರಸ್ಯ ನಡಿಗೆ ಆರಂಭವಾಗಲಿರುವ ಫರಂಗಿಪೇಟೆಯಲ್ಲಿ ಬಸ್ ಗಳ ಮೇಲೆ ದುಷ್ಕರ್ಮಿಗಳಿಂದ‌ ಕಲ್ಲು‌ ತೂರಾಟ ನಡೆದಿದೆ.

ರಮಾನಾಥ ರೈ ಅವರ ಸಾಮರಸ್ಯ ನಡಿಗೆ ಫರಂಗಿಪೇಟೆಯಿಂದ ಮಾಣಿಯವರೆಗೆ ನಡೆಯಲಿದ್ದು, ಶಾಂತಿಯುತವಾಗಿ ನಡೆಯಲಿರುವ ಸಾಮರಸ್ಯ ನಡಿಗೆಗೆ ಆರಂಭದಲ್ಲೇ ವಿಘ್ನಮಾಡಲು ದುಷ್ಕರ್ಮಿಗಳು ಬಸ್ಸುಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ.
ಇಂದು ಬೆಳ್ಳಂಬೆಳಿಗ್ಗೆ ರಾಜಹಂಸ ಹಾಗೂ ಕೆಎಸ್ ಆರ್ ಟಿಸಿ ಬಸ್ ಗಳ ಮೇಲೆ ಕಲ್ಲು‌ ತೂರಾಟ ನಡೆಸಲಾಗಿದೆ. ಪ್ರಯಾಣಿಕರು ಯಾವುದೇ ಗಾಯಗಳಾಗದೆ ಪಾರಾಗಿದ್ದಾರೆ.

ರಮಾನಾಥ ರೈ ನೇತೃತ್ವದ ಸಾಮರಸ್ಯ ನಡಿದೆ ಕಲ್ಲಡ್ಕ ಮಾರ್ಗವಾಗಿ ಸಾಗಲಿದೆ. ಸಾಮರಸ್ಯ ನಡಿಗೆಗೆ ನಟ ಪ್ರಕಾಶ್ ರೈ,ಸೇರಿದಂತೆ ಸಿಪಿಎಂ ಮುಖಂಡರು ಸಾಥ ನೀಡಲಿದ್ದಾರೆ.

ಸಾಮರಸ್ಯ ನಡಿಗೆ ಗೆ 1000 ಕ್ಕೂ ಹೆಚ್ಚು ಪೊಲೀಸರ ಭದ್ರತೆ ನೀಡಲಾಗಿದ್ದು, ಸುಮಾರು 300KSRP ಪೊಲೀಸರು ಸೇರಿದಂತೆ ಠಾಣಾ ವ್ಯಾಪ್ತಿಯ ಪೊಲೀಸರಿಂದ ಭಧ್ರತೆ ನೀಡಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *