Connect with us

LATEST NEWS

ಮಹಿಳಾ ಕಾರ್ಪೋರೇಟರ್ ಜೊತೆ ಅಸಭ್ಯ ವರ್ತನೆ – ಆರೋಪಿಗೆ ಧರ್ಮದೇಟು

ಮಹಿಳಾ ಕಾರ್ಪೋರೇಟರ್ ಜೊತೆ ಅಸಭ್ಯ ವರ್ತನೆ – ಆರೋಪಿಗೆ ಧರ್ಮದೇಟು

ಮಂಗಳೂರು ಮಾರ್ಚ್ 12: ವ್ಯಕ್ತಿಯೊಬ್ಬ ಮಹಿಳಾ ಕಾರ್ಪೋರೇಟರ್ ಜೊತೆ ಅಸಭ್ಯವಾಗಿ ವರ್ತಿಸಲು ಹೋಗಿ ಅವರಿಂದಲೇ ಧರ್ಮದೇಟು ತಿಂದ ಘಟನೆ ನಡೆದಿದೆ.

ಮಂಗಳೂರು ಮಹಾನಗರಪಾಲಿಕೆಯ ಸುರತ್ಕಲ್ ಕ್ಷೇತ್ರದ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಅವರ ಜೊತೆ ಅಬ್ದುಲ್ ಸತ್ತಾರ ಎಂಬಾತ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಹೇಳಲಾಗಿದ್ದು, ಆತನ ವರ್ತನೆಗೆ ಪ್ರತಿಭಾ ಕುಳಾಯಿ ಧರ್ಮದೇಟು ನೀಡಿದ್ದಾರೆ.

ಪ್ರತಿಭಾ ಕುಳಾಯಿ ಅವರು ಶಾಸಕ ಮೊಯ್ದೀನ್ ಬಾವಾರ ಕಚೇರಿಯಲ್ಲೇ ಅಬ್ದುಲ್ ಸತ್ತಾರ್ ಗೆ ಹೊಡೆಯಲು ಯತ್ನಿಸಿದ್ದರು ಆದರೆ ಆತ ತಪ್ಪಿಸಿ ಓಡಿ ಹೋಗಿದ್ದ. ಮತ್ತೆ ಪ್ರತಿಭಾ ಕಾರಿಗೆ ಅಡ್ಡ ಬಂದಾಗ ಧರ್ಮದೇಟು ನೀಡಿದ್ದಾರೆ. ಪ್ರತಿಭಾ ಕುಳಾಯಿ ಅವರಿಂದ ಪೆಟ್ಟು ತಿಂದು ಅಬ್ದುಲ್ ಸತ್ತಾರ್ ಓಡಿ ಹೋಗಿದ್ದಾನೆ.

ಅಬ್ದುಲ್ ಸತ್ತಾರ್ ವಿರುದ್ದ ಸುರತ್ಕಲ್ ವ್ಯಾಪ್ತಿಯಲ್ಲಿ ಈ ಹಿಂದೆಯೂ ಮಹಿಳೆಯರ‌ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪ ಇದ್ದು, ಮಹಿಳೆಯರ ಖಾಸಗಿ ಜೀವನದಲ್ಲಿ ಮಧ್ಯಪ್ರವೇಶಿಸುತ್ತಿರುವ ಬಗ್ಗೆ ಆರೋಪ‌ವನ್ನು ಹೊಂದಿದ್ದಾನೆ. ಅಲ್ಲದೇ ಯುವತಿ ವಿಚಾರದಲ್ಲೇ ಈ ಹಿಂದೆ ಹಿಂದು ಸಂಘಟನೆಗಳು ಅಬ್ದುಲ್ ಸತ್ತಾರ್ ಕೈ ಕಡಿದಿದ್ದರು, ಆದರೂ ಚಪಲ‌ ಬಿಡದ ಅಬ್ದುಲ್ ಸತ್ತಾರ್ ಮತ್ತೆ ತನ್ನ ಚಾಳಿಯನ್ನು ಮುಂದುವರೆಸಿದ್ದಾನೆ, ಆದರೆ ಈ ಬಾರಿ ಮಹಿಳಾ ಕಾರ್ಪೋರೇಟರ್ ಗೆ ಕಿರುಕುಳ ನೀಡಲು ಹೋಗಿ ಅವರಿಂದಂಲೇ ಪೆಟ್ಟು ತಿಂದಿದ್ದಾನೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *