Connect with us

LATEST NEWS

ಪ್ರಕಾಶ್ ರೈ ಗೆ ಗೊತ್ತಿದೆ ಗೌರಿ ಲಂಕೇಶ್ ಕೊಲೆಗಾರ ಯಾರು ಎಂದು – ಚಕ್ರವರ್ತಿ ಸೂಲಿಬೆಲೆ

ಪ್ರಕಾಶ್ ರೈ ಗೆ ಗೊತ್ತಿದೆ ಗೌರಿ ಲಂಕೇಶ್ ಕೊಲೆಗಾರ ಯಾರು ಎಂದು – ಚಕ್ರವರ್ತಿ ಸೂಲಿಬೆಲೆ

ಮಂಗಳೂರು ನವೆಂಬರ್ 13: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾ ಹೇಳಿಕೆ ನೀಡುತ್ತಿರುವ ಪ್ರಕಾಶ್ ರೈ ಅವರನ್ನು ತೀವ್ರ ವಿಚಾರಣೆಗೆ ಪೊಲೀಸರು ಒಳಪಡಿಸಿದರೆ ಸತ್ಯಾಂಶ ಹೊರ ಬರಲಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಮಂಗಳೂರಿನಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ಎಡಪಂಥೀಯರ ಹತ್ಯೆ: ಹಿಂದೂಗಳ ಮೇಲೆ ಆರೋಪ ಎಂಬ ವಿಷಯದ ಬಗ್ಗೆ ನಡೆದ ಸಂವಾದದಲ್ಲಿ ಈ ಹೇಳಿಕೆ ನೀಡಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದ ದಿನದಿಂದ ಆರೋಪವನ್ನು ಹಿಂದೂ ಸಂಘಟನೆಗಳ ಮೇಲೆ ಹೊರಿಸುವ ಪ್ರಯತ್ನ ನಡೆಯುತ್ತಿದ್ದು, ಇದಕ್ಕೆ ಪ್ರಕಾಶ ರೈ ರಂಥ ನಟರು ಬಲಪಂಥಿಯರೇ ಎಂದು ಹೇಳುತ್ತಿದ್ದಾರೆ ಎಂದರು. ದಿನಾ ಗೌರಿ ಲಂಕೇಶ ಹತ್ಯೆ ಬಗ್ಗೆ ಬಲಪಂಥಿಯರ ವಿರುದ್ದ ಆರೋಪ ಮಾಡುವ ಪ್ರಕಾಶ್ ರೈಗೆ ಕೊಲೆಗಾರ ಯಾರು ಎಂದು ತಿಳಿದಿದೆ ಎಂದರ್ಥ. ಈ ಹಿನ್ನಲೆಯಲ್ಲಿ ಪ್ರಕಾಶ್ ರೈ ಅವರನ್ನು ಪೊಲೀಸರು ಬಂಧಿಸಿ ತೀವ್ರ ವಿಚರಾಣೆ ನಡೆಸಿದರೆ ಯಾರು ಕೊಲೆಗಾರ ಎಂದು ತಿಳಿಯುತ್ತದೆ ಎಂದು ಹೇಳಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *