LATEST NEWS
ಪೇಟಾ ವಿರುದ್ದ ಕಿಡಿಕಾರಿದ ಸದಾನಂದ ಗೌಡ
ಪೇಟಾ ವಿರುದ್ದ ಕಿಡಿಕಾರಿದ ಸದಾನಂದ ಗೌಡ
ಉಡುಪಿ ನವೆಂಬರ್ 12: ಮೂಡಬಿದ್ರೆಯಲ್ಲಿ ನಡೆದ ಕಂಬಳದಲ್ಲಿ ಕೋಣಿಗಳಿಗೆ ಹಿಂಸೆ ನೀಡಲಾಗಿದೆ ಎಂದ ಪೇಟಾದವರ ವಿರುದ್ದ ಕೇಂದ್ರ ಸಚಿವ ಸದಾನಂದ ಗೌಡ ಕಿಡಿಕಾರಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪೇಟಾದವರಿಗೆ ಕೋಣಗಳ ಪಾಲನೆ ಪೋಷಣೆ ಬಗ್ಗೆ ಎಷ್ಟು ತಿಳಿದಿದೆ ಎಂದು ಪ್ರಶ್ನಿಸಿದರು. ಸಾವಿರಾರು ಕೋಣಗಳ ಬಲಿ ದಿನನಿತ್ಯ ನಡೆಯುತ್ತಿದೆ ಕಸಾಯಿಖಾನೆ ವಿರುದ್ದ ಪೇಟಾ ಏನು ಮಾಡಿದೆ ಎಂದು ಪ್ರಶ್ನಿಸಿದರು. ಕಂಬಳದ ಬಗ್ಗೆ ಮಾತನಾಡುವ ಮೊದಲು ಪೇಟಾದವರು ಸಮಗ್ರ ಅಧ್ಯಯನ ನಡೆಸಲಿ ಎಂದು ಹೇಳಿದರು.
ಕರಾವಳಿ ಜನತೆಗೆ ಇರುವ ಏಕೈಕ ಮನರಂಜನೆ ಕಂಬಳ, ಪೇಟಾದವರ ರೀತಿ ಕುದರೆ ರೇಸ್ ಗೆ ಕರಾವಳಿಯರು ಹೋಗುವುದಿಲ್ಲ ಎಂದ ಅವರು, ಪೇಟಾದವರು ಕುದುರೆ ರೇಸ್ ನೋಡಿಲ್ವಾ ಅಲ್ಲ ಕುದುರೆಗಳಿಗೆ ಹೊಡೆಯೋದನ್ನು ನೀವು ನೋಡಿಲ್ವ ಎಂದು ಪೇಟಾದವರ ವಿರುದ್ದ ಕೇಂದ್ರ ಸಚಿವ ಸದಾನಂದ ಗೌಡ ಗರಂ ಆದರು.
ಕೇವಲ ಪ್ರಚಾರಕ್ಕಾಗಿ ಪೇಟಾದವರು ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಕೇಂದ್ರ ರಾಜ್ಯ ಸರಕಾರಗಳು ಹಿಂಸೆಯ ಪರವಾಗಿಲ್ಲ ಎನ್ನುವುದು ಪೇಟಾದವರು ತಿಳಿದು ಕೊಳ್ಳಲಿ. ಇದು ಪೇಟಾದವರದ್ದು ಬೇಜವಾಬ್ದಾರಿಯುತ ನಡವಳಿಕೆ, ಎಲ್ಲದಕ್ಕೂ ಕೊನೆಯೆಂಬೂದು ಇದೆ ಎಂದು ಹೇಳಿದರು. ಈ ಕೊನೆಯನ್ನು ಸುಪ್ರೀಂ ಕೋರ್ಟ್ ಮಾಡುತ್ತದೆ ಹೇಳಿದರು.
You must be logged in to post a comment Login