Connect with us

LATEST NEWS

ಕ್ರಿಮಿನಲ್ ಗಳ ಕ್ರೈಮ್ ಡೈರಿ ಬರೆದು ಸ್ವತ:  ಕ್ರೈಮ್ ಸ್ಟೋರಿಯಾದ ರವಿ ಬೆಳಗೆರೆ 

ಕ್ರಿಮಿನಲ್ ಗಳ ಕ್ರೈಮ್ ಡೈರಿ ಬರೆದು ಸ್ವತ:  ಕ್ರೈಮ್ ಸ್ಟೋರಿಯಾದ ರವಿ ಬೆಳಗೆರೆ 

ಎಸ್ …ಹಾಯ್ ಬೆಂಗಳೂರು ಪತ್ರಿಕೆಯ ಊದ್ಯೋಗಿ ಸುನೀಲ್ ಹೆಗ್ಗರವಳ್ಳಿ ಇವತ್ತಿಗೆ ಗುಂಡೇಟಿನಿಂದ ಸಾಯಬೇಕಿತ್ತು .

ವಿಜಯಪುರದ ಸೂಪರಿ ಕಿಲ್ಲರುಗಳಿಗೆ ಈ ಕೊಲೆ ಮಾಡಲು ಲಕ್ಷ ಲಕ್ಷ ಕಾಸು‌ಕೊಡಲಾಗಿತ್ತು.

ಕೊಲೆ ಮಾಡಲು ಸುಪರಿ ಕೊಟ್ಟಿದ್ದು ಯಾರ್ ಗೊತ್ತಾ.

ಬೇರಾರು ಅಲ್ಲಾ ರಾಜ್ಯದ ಟಾಪ್ ಪತ್ರಕರ್ತ ಹಾಯ್ ಬೆಂಗಳೂರು ಪತ್ರಿಕೆಯ ಮಾಲಕ ರವಿ ಬೆಳಗೆರೆ.

ಹೌದು ನಂಬಕೊ ಸಾದ್ಯವಾಗದಿದ್ರು ಇದುವೇ ಸತ್ಯ. ತನ್ನದೇ ಸ್ವಂತ ಸಂಸ್ಥೆಯ ಉದ್ಯೋಗಿಯು ಅತ್ಮೀಯನು ಆದ ಸುನೀಲ್ ಹೆಗ್ಗರವಳ್ಳಿಯನ್ನು ಕೊಲ್ಲಲು ಸ್ವತಃ ರವಿ ಬೆಳಗೆರೆ ವಿಜಯಪುರದ ಶಾರ್ಪ್ ಶೂಟರ್ ಗಳಿಗೆ ಸೂಪರಿ‌ಕೊಟ್ಟಿದ್ದರು.

ಸುನೀಲ್ ಅವರು ರವಿ ಬೆಳಗೆರೆ ಪತ್ನಿಯೊಂದಿಗೆ ಅನೈತಿಕ ಸಂಬಂಧ ಇಟ್ಟಿದ್ದ ಎಂಬ ವರ್ತಮಾನ ಬರುತ್ತಿದೆ.

ಅದ್ರೂ ನಿಖರ ಕಾರಣ ಪೊಲೀಸರೇ ಹೇಳಬೇಕಾಗಿದೆ.

ಈಗಾಗಲೇ ರವಿ ಬೆಳಗೆರೆಯನ್ನು ಪೊಲೀಸರು ಬಂಧಿಸಿ‌ ವಿಚಾರಣೆ ನಡೆಸುತ್ತಿದ್ದಾರೆ.

ಸುನೀಲ್ ಹೆಗ್ಗರವಳ್ಳಿ

ಅಗಸ್ಟ್ ತಿಂಗಳಲ್ಲಿ‌ ಸುನೀಲ್ ಕೊಲೆಗೆ ಸ್ಕೆಚ್ ಹಾಕಿ ಕೊಂಡಿದ್ದರು , ಸುನೀಲ್ ಮನೆಗೆ ಶಾರ್ಪ್ ಶೂಟರ್ಸ್ ಹೋಗಿಯು ಇದ್ದರು.

ಅದ್ರೆ ಎದುರುಗಡೆಯಿದ್ದ ಸಿ ಸಿ ಕ್ಯಾಮರ ನೋಡಿ ವಾಪಸ್ಸಾಗಿದ್ದರು. ತದ ನಂತರದ ಬೆಳವಣಿಗೆಯಲ್ಲಿ ಗೌರಿ ಲಂಕೇಶ್ ಹತ್ಯೆ ಆಯ್ತು.

ಈ ಕಾರಣದಿಂದ ಪೊಲೀಸರ ಕಣ್ಗಾವಲು ಎಲ್ಲೆಂದರಲ್ಲಿ ಇದ್ದ ಕಾರಣ ಶೂಟರ್ಸ್ ವಿಜಯನಗರಕ್ಕೆ ವಾಪಸ್ಸಾಗಿದ್ದರು.

ವಿಚಾರವಾದಿ, ಹೋರಾಟಗಾರ್ತಿ ,ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು.

ಗೌರಿ ಹಂತಕರ ಬಗ್ಗೆ ಪೊಲೀಸರು ಯಾವುದೇ ಅಯಾಮಗಳಿಂದಲೂ ತನಿಖೆ ನಡೆಸಿದರೂ ಒಂದೇ ಒಂದು‌ ಕ್ಲೂ ಸಿಗದೇ ನಿರಾಶರಾಗಿದ್ದರು.

ಹೀಗೆ ತನಿಖೆ ನಡೆಸುತ್ತಾ ಅಕ್ರಮ ಪಿಸ್ತೂಲು ಗಳ ಜಾಲ ಹುಡ್ಕೊಂಡು ಹೋದ ಪೊಲೀಸರು ವಿಜಯನಗರ ತಲುಪ್ಪುತ್ತಾರೆ.

ಅಲ್ಲಿ ಪಿಸ್ತೂಲ್ ಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಇಬ್ಬರು ಖತರ್ ನಾಕ್ ಶಾರ್ಪ್ ಶೂಟರ್ ಗಳ‌ ಬಗ್ಗೆ ಪೊಲೀಸರಿಗೆ ಹಿಂಟ್ ಸಿಗುತ್ತೆ.

ಇವರು ಖರೀದಿಸಿದ ಪಿಸ್ತೂಲ್ ಗಳು ಗೌರಿ ಲಂಕೇಶ್‌ ಕೊಲೆಗೆ ಬಳಸಿರಬಹುದೆಂಬ ಗುಮಾನಿಯಲ್ಲಿ ಇಬ್ಬರನ್ನು ಎತ್ತಕೊಂಡು ವಿಚಾರಿಸಿದಾಗ ಹೊರ ಬಿದ್ದಿದ್ದು  ಈ ಸ್ಫೊಟಕ ವಿಷಯ.

ಇದೀಗ ಕ್ರಿಮಿನಲ್ ಗಳ‌ ಜೊತೆ ಕ್ರಿಮಿನಲ್ಸ್ ಗಳ ಕ್ರೈಮ್ ಡೈರಿ ಮಾಡುತ್ತಿದ್ದವ ಕೂಡ ಕ್ರೈಮ್ ಸ್ಟೋರಿಯಾದ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *