Connect with us

    LATEST NEWS

    ಈ ಬಾರಿಯ ಚುನಾವಣೆ ರಮಾನಾಥ ರೈದ್ದು ಕೊನೆಯ ಬಯಲಾಟ : ಹರಿಕೃಷ್ಣ ಬಂಟ್ವಾಳ್

    ಈ ಬಾರಿಯ ಚುನಾವಣೆ ರಮಾನಾಥ ರೈದ್ದು ಕೊನೆಯ ಬಯಲಾಟ :ಹರಿಕೃಷ್ಣ ಬಂಟ್ವಾಳ್

    ಮಂಗಳೂರು, ಜನವರಿ 17 : ರಾಜ್ಯ ಅರಣ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ವಿರುದ್ಧ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್ ಕಿಡಿ ಕಾರಿದ್ದಾರೆ.

    ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಬಂಟ್ವಾಳ್ ಅವರು ಸಚಿವ ರಮಾನಾಥ ರೈ ಅವರ ಮೇಲೆ ಹರಿಹಾಯ್ದರು.

    ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಬಿ. ಜನಾರ್ದನ ಪೂಜಾರಿಯನ್ನು ಕಣ್ಣೀರು ಹಾಕಿಸಿದ್ದು, ಜನಾರ್ದನ ಪೂಜಾರಿಯನ್ನು ಚುನಾವಣೆಯಲ್ಲಿ ಸೋಲಿಸಿದ್ದು ಎಲ್ಲವೂ ರಮಾನಾಥ ರೈ ಎಂದರು.

    ಬಿಲ್ಲವರ ಬಗ್ಗೆ ಮಾತನಾಡುವ ನೈತಿಕತೆ ರಮಾನಾಥ ರೈಗಿಲ್ಲ,ರೈಗೆ ತಾಕತ್ತಿದ್ದರೆ ಬಂಟ್ವಾಳದಲ್ಲಿ ಬಿಲ್ಲವರಿಗೆ ಸೀಟು ಕೊಡಿಸಲಿ ಅಥವಾ ಮುಸ್ಲಿಮರ ಕೃಪೆಯಿಂದ ಗೆದ್ದಿದ್ದೇನೆಂದ ರೈ ಮುಸ್ಲಿಂ ಒಬ್ಬನಿಗೆ ಸೀಟು ಕೊಡಲಿ ಎಂದು ಸವಾಲು ಹಾಕಿದರು.

    ಈ ಬಾರಿಯ ಚುನಾವಣೆ ರಮಾನಾಥ ರೈಯದ್ದು ಕೊನೆಯ ಬಯಲಾಟ ಎಂದ ಬಂಟ್ವಾಳ್ ರೈ ಮಹಿಷಾಸುರನಾದರೆ, ಜನರು ದೇವಿಯ ರೂಪದಲ್ಲಿ ಅವರನ್ನು ಮುಗಿಸಲಿದ್ದಾರೆ ಎಂದು ವ್ಯಂಗ್ಯವಾಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply