Connect with us

DAKSHINA KANNADA

ಅಕ್ರಮವಾಗಿ ನಾಡಕೋವಿ ತಯಾರಿಸುತ್ತಿದ್ದ ಮನೆಗೆ ಪೋಲೀಸ್ ದಾಳಿ

ಪುತ್ತೂರು, ಮೇ 11: ಅಕ್ರಮವಾಗಿ ನಾಡಕೋವಿ ತಯಾರಿಸುತ್ತಿದ್ದ ಮನೆಗೆ ಪೋಲೀಸ್ ದಾಳಿ ನಡೆಸಿದ್ದು ನಾಡಕೋವಿ,ಸಜೀವ ತೋಟೆ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಪೋಲೀಸ್ ಠಾಣಾ ವ್ಯಾಪ್ತಿಯ ನಾಲ್ಕೂರು ಛತ್ರಪ್ಪಾಡಿ ಎಂಬಲ್ಲಿ ಅಕ್ರಮವಾಗಿ ನಾಡಕೋವಿ ತಯಾರಿಸುತ್ತಿದ್ದ ಮನೆಗೆ ಪೋಲೀಸ್ ದಾಳಿ ನಡೆಸಿದ್ದು, ತನಿಖೆಯ ಸಂದರ್ಭದಲ್ಲಿ ಹಲವರಿಗೆ ನಾಡಕೋವಿ ತಯಾರಿಸಿ ಕೊಟ್ಟಿರುವ ಬಗ್ಗೆ ಪೋಲೀಸರಿಗೆ ಮಾಹಿತಿ ದೊರಕಿರುತ್ತದೆ.

ಈ ಪ್ರಕರಣದ ಪ್ರಮುಖ ಆರೋಪಿ ದಿವಾಕರ ಆಚಾರಿ ಸಹಿತ ಕಾರ್ತಿಕ್ (25), ಅಶೋಕ್ (35), ಚಂದ್ರನ್ (33) ಬಂಧಿತ ಆರೋಪಿಗಳು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *