Connect with us

LATEST NEWS

ಮಂಗಳೂರು ಪ್ರಿಯತಮೆಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಭಗ್ನ ಪ್ರೇಮಿ

ಮಂಗಳೂರು ಪ್ರಿಯತಮೆಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಭಗ್ನ ಪ್ರೇಮಿ

ಮಂಗಳೂರು ಸೆಪ್ಟೆಂಬರ್ 28: ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಪ್ರಿಯತಮೆಯನ್ನು ಕೊಲೆಗೈದು ಪ್ರಿಯಕರ ಆತ್ಮಹತ್ಯೆಗೆ ಶರಣಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಪ್ರಾಂತ್ಯ ಗ್ರಾಮದಲ್ಲಿ ನಡೆದಿದೆ.

ಮೃತ ಪ್ರಿಯಕರ ರೋಹಿತ್ ಮಂಗಳೂರು ನಗರದ ಬಜಾಲ್ ನಿವಾಸಿಯಾಗಿದ್ದು, ಚರಿಷ್ಮಾ ಅವರು ಪ್ರಾಂತ್ಯದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಮೂಡಬಿದ್ರೆಯ ಪ್ರಾಂತ್ಯ ಶಾಲೆಯ ಬಳಿಯ ನಿವಾಸಿ ಕು. ಚರಿಷ್ಮ.ಆರ್.ಕರ್ಕೇರಾ(22) ಎಂಬಾಕೆಯನ್ನು ಮಂಗಳೂರು ಬಜಾಲ್ ನಿವಾಸಿ ಲೋಹಿತ್(26) ಎಂಬಾತನು ಪ್ರೀತಿಸುತ್ತಿದ್ದ ಎಂದು ಹೇಳಲಾಗಿದೆ. ಆದರೆ ಇತ್ತೀಚೆಗೆ ಚರಿಷ್ಮ ಲೋಹಿತನ್ನು ನಿರಾಕರಿಸುತ್ತಿದ್ದಲೆನ್ನಲಾಗಿದೆ.

ಇದರಿಂದ ಉದ್ರಿಕ್ತಗೊಂಡ ಲೋಹಿತ್ ಶುಕ್ರವಾರ ಯುವತಿ ಮನೆಯಲ್ಲಿ ಒಬ್ಬಳೇ ಇದ್ದಾಗ ಲೋಹಿತ್ ಆಕೆಯ ಮನೆಗೆ ನುಗ್ಗಿ ಚೂರಿಯಿಂದ ಇರಿದು, ತಲೆಗೆ ಸುತ್ತಿಗೆಯಿಂದ ಹೊಡೆದಿದ್ದಾನೆ. ಆ ಬಳಿಕ ಆಕೆಯ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಇತ್ತ ಪ್ರಿಯತಮನ ಕೃತ್ಯದಿಂದ ಗಂಭೀರ ಗಾಯಗೊಂಡಿದ್ದ ಯುವತಿಯನ್ನು ಕೂಡಲೇ ಮೂಡಬಿದ್ರೆ ಆಸ್ಪತ್ರೆಗೆ ದಾಖಲಾಯಿಸತಾದ್ರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಘಟನೆ ಸಂಬಂಧ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *