BANTWAL
ಉಕ್ಕಿ ಹರಿಯುತ್ತಿರುವ ನದಿಗೆ ಆಕಸ್ಮಿಕವಾಗಿ ಬಿದ್ದು ಯುವಕ ನೀರುಪಾಲು
ಉಪ್ಪಿನಂಗಡಿ ಸೆಪ್ಟೆಂಬರ್ 02: ನೀರಿನಲ್ಲಿ ತೇಲಿ ಬರುತ್ತಿರುವ ತೆಂಗಿನಕಾಯಿ ಸಂಗ್ರಹಿಸಲು ಹೋಗಿ ಆಕಸ್ಮಿಕವಾಗಿ ಯುವಕನೋಬ್ಬ ಹರಿಯುವ ನೀರಿಗೆ ಬಿದ್ದು ನಾಪತ್ತೆಯಾಗಿರುವ ಘಟನೆ ಉಪ್ಪಿನಂಗಡಿಯ ಕೆಮ್ಮಾರ ಎಂಬಲ್ಲಿ ನಡೆದಿದೆ.
ನಾಪತ್ತೆಯಾಗಿರುವ ಯುವಕನನ್ನು ಇಸ್ಮಾಯಿಲ್ ಎಂಬುವರ ಪುತ್ರ ಶಫಿಕ್ (18) ಎಂದು ಗುರುತಿಸಲಾಗಿದೆ.
ಉಪ್ಪಿನಂಗಡಿಯ ಕೆಮ್ಮಾರ ಎಂಬಲ್ಲಿ ತೋಡಿನಲ್ಲಿ ಸೇತುವೆಯ ಅಡಿಯಲ್ಲಿ ಹಳೆಯ ಮುಳುಗು ಸೇತುವೆ ಮೇಲೆ ನಿಂತು ನೀರಿನಲ್ಲಿ ತೇಲಿ ಬರುತ್ತಿದ್ದ ತೆಂಗಿನ ಕಾಯಿ ಸಂಗ್ರಹಿಸುತ್ತಿದ್ದಾಗ ಆಕಸ್ಮಿಕವಾಗಿ ಹರಿಯುವ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾನೆ. ಮುಳುಗು ಸೇತುವೆ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದ್ದು, ಆ ಪರಿಸರದಲ್ಲಿ ಒಂದು ತಾಸು ಹುಡುಕಾಟ ನಡೆಸಲಾಯಿತು.
ಶೋಧ ಕಾರ್ಯ ಮುಂದುವರಿದಿದೆ. ಎಸ್.ಕೆ.ಎಸ್.ಎಸ್.ಎಫ್ ವಿಖಾಯ ತಂಡದ ಸದಸ್ಯರು, ಸ್ಥಳೀಯ ಯುವಕರು, ಅಗ್ನಿಶಾಮಕ ದಳದವರು ಶೋಧ ಕಾರ್ಯ ನಡೆಸಿದರು.
You must be logged in to post a comment Login